ಕಾವು: ಮೆಸ್ಕಾಂ ಪವರ್‌ಮ್ಯಾನ್ ರಮ್ಜಾನ್‌ಗೆ ವರ್ಗಾವಣೆ-ತುಡರ್ ಯುವಕ ಮಂಡಲದಿಂದ ಸನ್ಮಾನದ ಅಭಿನಂದನೆ

0

ಕಾವು: ಮಾಡ್ನೂರು ಗ್ರಾಮದಲ್ಲಿ 8 ವರ್ಷಗಳ ಕಾಲ ಮೆಸ್ಕಾಂ ಪವರ್‌ಮ್ಯಾನ್ ಆಗಿ ಸೇವೆ ಸಲ್ಲಿಸಿ ಹುಟ್ಟೂರು ಬಾಗಲಕೋಟೆಗೆ ವರ್ಗಾವಣೆಗೊಂಡ ರಮ್ಜಾನ್‌ರವರಿಗೆ ಕಾವು ತುಡರ್ ಯುವಕ ಮಂಡಲದ ವತಿಯಿಂದ ಸೆ.14ರಂದು ಸಂಜೆ ತುಡರ್ ಸದನದಲ್ಲಿ ಬೀಳ್ಕೊಡುಗೆ ಸಲ್ಲಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.


ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ರಮ್ಜಾನ್‌ರವರಿಗೆ ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ, ಫಲಪುಷ್ಫ ನೀಡಿ ಸನ್ಮಾನಿಸಿದರು. ಅರಿಯಡ್ಕ ಗ್ರಾ.ಪಂ ಸದಸ್ಯ ಲೋಕೇಶ್ ಚಾಕೋಟೆ ಅಭಿನಂದನಾ ಭಾಷಣ ಮಾಡಿದರು. ಯುವಕ ಮಂಡಲದ ಅಧ್ಯಕ್ಷ ಜಗದೀಶ್ ನಾಯ್ಕ ಸಭಾಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ರಾಮಣ್ಣ ನಾಯ್ಕ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಸ್ವಾಗತಿಸಿ, ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು.


ಕಾರ್ಯಕ್ರಮದಲ್ಲಿ ಯುವಕ ಮಂಡಲದ ಪದಾಧಿಕಾರಿಗಳಾದ ಶ್ರೀಕುಮಾರ್ ಬಲ್ಯಾಯ, ಹರೀಶ್ ಕೆರೆಮೂಲೆ, ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ ನನ್ಯ, ಸದಸ್ಯರಾದ ನಿರಂಜನ ಕಮಲಡ್ಕ, ರಾಜೇಶ್ ಬಿ, ಬಾಲಕೃಷ್ಣ ಪಾಟಾಳಿ, ರಮೇಶ್ ಗೌಡ, ಬಾಲಕೃಷ್ಣ ನಾಯ್ಕ, ಭವಿತ್ ರೈ, ಯತೀಶ್ ರೈ, ಹರ್ಷಿತ್ ಎ.ಆರ್, ರಶ್ಮಿತ್ ಆಚಾರಿಮೂಲೆಯವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here