ಗಣೇಶೋತ್ಸವ ಶೋಭಾಯಾತ್ರೆ ರಾತ್ರಿ 10ರೊಳಗೆ ಮುಗಿಸಿ, ಡಿ ಜೆ ನಿಷೇಧಿಸುವಂತೆ ಪೊಲೀಸ್ ಸೂಚನೆ -ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಸಭೆ

0

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯವ ಸಾರ್ವಜನಿಕ‌ ಗಣೇಶೋತ್ಸವದ ಕುರಿತು ಸಂಘಟಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಸಭೆಯು ಪುತ್ತೂರು ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನಿಲ್ ಅವರ ಅಧ್ಯಕ್ಷತೆಯಲ್ಲಿ ಸೆ.16 ರಂದು ನಡೆಯಿತು.


ಗಣೇಶೋತ್ಸವ ಶೋಭಾಯಾತ್ರೆ ರಾತ್ರಿ ಗಂಟೆ 10ರೊಳಗೆ ಮುಗಿಸಬೇಕು ಮತ್ತು ಡಿ ಜೆ ಸೌಂಡ್ ನಿಷೇಧಿಸುವಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ಎಸ್ ಐ ಆಂಜನೆಯ ರೆಡ್ಡಿ ಸಮಿತಿಯ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಮಿತಿ ಪದಾಧಿಕಾರಿಗಳು ಪೊಲೀಸ್ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸುಮಾರು 15 ಕಡೆಯ ಗಣೇಶೊತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here