ದೂರದರ್ಶನ ಚಂದನ ವಾಹಿನಿಯಲ್ಲಿ ‘ಅಂಬರ ಮರ್ಲೆರ್’ ಪ್ರತಿ ಆದಿತ್ಯವಾರ ಮಧ್ಯಾಹ್ನ 1.30 ರಿಂದ 2 ಗಂಟೆಗೆ ಪ್ರಸಾರ

0

ತುಳು ರಂಗಭೂಮಿಯಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ರಂಗಭೂಮಿ ಕಲಾವಿದ, ಸಿನಮಾ ನಟ,ನಿರ್ದೇಶಕ ‘ರಂಗದ ರಾಜೆ’ ಸುಂದರ ರೈ ಮಂದಾರ ಕಥೆ, ನಿರ್ಮಾಣ ಹಾಗೂ ಪ್ರಧಾನ ನಿರ್ದೇಶನದಲ್ಲಿ ಮೂಡಿಬಂದಿರುವ ತುಳು ಹಾಸ್ಯ ಧಾರಾವಾಹಿ ‘ ಅಂಬರ ಮರ್ಲೆರ್’ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಪ್ರತಿ ಆದಿತ್ಯವಾರ ಮಧ್ಯಾಹ್ನ 1.30 ರಿಂದ 2 ಗಂಟೆಯವರೇಗೆ ಈ ಧಾರಾವಾಹಿಯು ಪ್ರಸಾರಗೊಳ್ಳಲಿದೆ ಎಂದು ಅರ್ನ ಕ್ರಿಯೇಷನ್ಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಅರ್ನ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣಗೊಂಡ ಅಂಬರ ಮರ್ಲೆರ್ ಹಾಸ್ಯ ಧಾರಾವಾಹಿಯು ಈಗಾಗಲೇ 24 ಕಂತುಗಳನ್ನು ತಯಾರು ಮಾಡಿದೆ. ಪುತ್ತೂರು, ಮಂಗಳೂರು, ಹಾಗೂ ಕೇರಳ ರಾಜ್ಯದ ಕೆಲವು ಭಾಗಗಳಲ್ಲಿ ಈ ಧಾರಾವಾಹಿಯ ಚಿತ್ರೀಕರಣ ನಡೆದಿದ್ದು, ಧಾರಾವಾಹಿಯಲ್ಲಿ ತುಳು ಹಾಗೂ ಕನ್ನಡ ಚಿತ್ರರಂಗದ, ರಂಗಭೂಮಿಯ ಹೆಸರಾಂತ ಹಾಸ್ಯ ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ. ಮಜಾ ಟಾಕೀಸ್ ನ ಗುಂಡು ಮಾಮ ಖ್ಯಾತಿಯ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್,ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ವಾರ್ ಹಾಗೇಯೇ ತುಳು ನಾಟಕ ರಂಗ, ಚಿತ್ರ ರಂಗದ ದಿಗ್ಗಜರಾದ ಸುಂದರ್ ರೈ ಮಂದಾರ, ಉಮೇಶ್ ಮಿಜಾರ್,ಅರುಣ್ ಚಂದ್ರ ಬಿ. ಸಿ ರೋಡ್, ರಾಜೇಶ್ ಮೀಯಪದವು, ರಂಜನ್ ಬೋಳೂರು,ಸೋಮನಾಥ ಶೆಟ್ಟಿ ಮಂಗಲ್ಪಾಡಿ,ರವಿ ರಾಮಕುಂಜ, ಸುನಿಲ್ ನೆಲ್ಲಿ ಗುಡ್ಡೆ,ರೂಪ ವರ್ಕಾಡಿ, ನಮಿತಾ ಕಿರಣ್, ಪ್ರಶ್ವಿನ್ ಪೊಳಲಿ ಹಾಗೂ 75 ಕ್ಕೂ ಹೆಚ್ಚ ತುಳು ನಾಟಕ ಹಾಗೂ ಸಿನಿಮಾ ಕಲಾವಿದರು ಅಭಿನಯಿಸಿದ್ದಾರೆ. ತಾಂತ್ರಿಕ ತಂಡದಲ್ಲಿ ಪ್ರಸಾದನ ಪ್ರಸಾದ್ ಕೊಯಿಲ,ಕಲೆ ಹಾಗೂ ನಿರ್ಮಾಣ ನಿರ್ವಹಣೆ ವಿಜಯ್ ಮಯ್ಯ ಐಲ,ಸಹ ನಿರ್ದೇಶನ ರವಿ ಎಂ ಎಸ್ ವರ್ಕಾಡಿ,ಸಾಹಿತ್ಯ ಹಾಗೂ ಗಾಯನ ಸೋಮನಾಥ ಶೆಟ್ಟಿ ಮಂಗಲ್ಪಾಡಿ,ಬೆಳಕು ಯುನಿಟ್ ರಾಜ್ ಪ್ರೊಡಕ್ಷನ್ಸ್
ಬೆಳಕು ಸಹಾಯ ಪ್ರಜ್ವಲ್ ಆಚಾರ್ಯ,ಪವನ್ ಕುಮಾರ್,ನವೀನ್,ಪ್ರಚಾರ ಕಲೆ ಗಣೇಶ್ ಕೆ, ಸಹ ಛಾಯಾಗ್ರಹಣ ಸಂಜಯ್ ನಾರಾಯಣ.ಅಶೋಕ್ ಬೇಕೂರ್,ಹಿನ್ನೆಲೆ ಸಂಗೀತ ಗುರು ಬಾಯಾರ್ ಮುಖ್ಯ ಛಾಯಾಗ್ರಹಣ ಹಾಗೂ ಸಂಕಲನ ಧನು ರೈ ಪುತ್ತೂರು, ಸಂಚಿಕೆ ನಿರ್ದೇಶನ ಪ್ರಜ್ವಲ್ ಕುಮಾರ್ ಅತ್ತಾವರ, ಕಥೆ, ನಿರ್ಮಾಣ, ಪ್ರಧಾನ ನಿರ್ದೇಶನದ ಜವಾಬ್ದಾರಿಯನ್ನು ಸುಂದರ್ ರೈ ಮಂದಾರ ನಿರ್ವಹಿಸಿದ್ದಾರೆ.

ಅರ್ನ ಕ್ರಿಯೇಷನ್ಸ್ ಸಂಸ್ಥೆ
ಅರ್ನ ಕ್ರಿಯೇಷನ್ಸ್ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ2017 ರಲ್ಲಿ ಪ್ರಾರಂಭವಾಗಿ ಮೊತ್ತ ಮೊದಲು ನಮ ತೆಪುಗ ಎನ್ನುವ ತುಳು ಹಾಸ್ಯ ಧಾರಾವಾಹಿಯನ್ನು ’ಸುದ್ದಿ” ಮಾಧ್ಯಮದಲ್ಲಿ ಬಿಡುಗಡೆಗೊಳಿಸಿತು. ತದನಂತರ ಅದೇ ಮಾಧ್ಯಮದಲ್ಲಿ ಅಂಡೆ ದುರ್ಸುಲು, ಪೂರಿ ಬಾಜಿ ಹಾಗೂ ಇನ್ನಿತರ ತುಳು ಹಾಸ್ಯ ಧಾರಾವಾಹಿಗಳನ್ನು ನಿರ್ಮಾಣ ಮಾಡಿ ಯಶಸ್ವಿ ಪ್ರದರ್ಶನ ನೀಡಿ ಪುತ್ತೂರಿನಲ್ಲಿ ಅಲ್ಲದೆ ಇಡೀ ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಲ್ಲಿ ಮನೆ ಮಾತಾಯಿತು. ಅರ್ನ ಕ್ರಿಯೇಷನ್ಸ್ ಸಂಸ್ಥೆ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬಂದಿದ್ದು ಸಂಸ್ಥೆಯಲ್ಲಿ ಪ್ರತಿಭಾನ್ವಿತ ಕಲಾವಿದರು, ಕ್ರಿಯಾಶೀಲ ತಂತ್ರಜ್ಞರ ತಂಡವನ್ನು ಮುನ್ನಡೆಸುತ್ತಾ ಬಂದಿದೆ. ಇದೀಗ ತಂಡ “ಅಂಬರ ಮರ್ಲೆರ್” ಎನ್ನುವ ಹೊಸ ತುಳು ಸಾಮಾಜಿಕ ಹಾಸ್ಯ ಧಾರಾವಾಹಿಯ ೨೪ ಕಂತುಗಳನ್ನು ತಯಾರು ಮಾಡಿದ್ದು ದೂರದರ್ಶನದ ಚಂದನ ವಾಹಿನಿಯ ಮುಖಾಂತರ ಹಳ್ಳಿ ಹಳ್ಳಿಯ ಹಾಗೂ ಇಡೀ ರಾಜ್ಯ ಮಟ್ಟದಲ್ಲಿ ಇರುವ ತುಳು ಪ್ರೇಕ್ಷಕರನ್ನು ಪ್ರತಿ ಭಾನುವಾರ ಮಧ್ಯಾಹ್ನ ಸಮಯ 01:30 ರಿಂದ 02:೦೦ ಗಂಟೆಯವರೆಗೆ ದೂರದರ್ಶನದ ಮುಂದೆ ಕುಟುಂಬ ಸಮೇತ ಕುಳಿತು ನೋಡಬೇಕು ಎಂಬುವುದು ಸಂಸ್ಥೆಯ ಆಶಯವಾಗಿದೆ.

ಸೆ.24ರಿಂದ ಪ್ರತಿ ಆದಿತ್ಯವಾರ
‘ಅಂಬರ ಮರ್ಲೆರ್’ ತುಳು ಹಾಸ್ಯ ಧಾರಾವಾಹಿಯು ಚಂದನ ವಾಹಿನಿಯಲ್ಲಿ ಸೆ.24ರಿಂದ ಪ್ರತೀ ಭಾನುವಾರ ಮಧ್ಯಾಹ್ನ 01:30 ರಿಂದ ೦2:೦೦ ಗಂಟೆಯ ವರೆಗೆ ಪ್ರಸಾರವಾಗಲಿದೆ. ತುಳುನಾಡಿನ ಸಮಸ್ತ ವೀಕ್ಷಕರು ಧಾರಾವಾಹಿಯನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here