ಇಂದು ಬಾಲವನದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಕವಿಗಳು ರಚಿಸಿದ ಹಾಡಿಗೆ ಶಾಸ್ತ್ರೀಯ ನೃತ್ಯ – ನೃತ್ಯಾಂಜಲಿ

0

ಪುತ್ತೂರು: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ ಕೋಟ ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ಅ.10ರಂದ ಬಾಲವನ ಬಯಲು ರಂಗ ಮಂದಿರದಲ್ಲಿ ನಡೆಯುವ ಡಾ ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಂಟೆ.9ಕ್ಕೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಕವಿಗಳನ್ನು ಕೇಂದ್ರವಾಗಿರಿಸಿ ಅವರು ರಚಿಸಿದ ಹಾಡಿನಲ್ಲೇ ನಮನ ಸಲ್ಲಿಸುವ ನೃತ್ಯಾಂಜಲಿ ಕಾರ್ಯಕ್ರಮ ನಡೆಯಲಿದೆ.

ಕನ್ನಡದ ಕವಿಗಳು ರಚಿಸಿರುವ ಕಾವ್ಯಗಳಿಗೆ ವಿದ್ವಾನ್ ದೀಪಕ್ ಕುಮಾರ್ ಅವರ ನಿರ್ದೇಶನದಲ್ಲಿ ಶಾಸ್ತ್ರೀಯವಾಗಿ ನೃತ್ಯ ಸಂಯೋಜನೆ ಮಾಡಿಕೊಂಡು ಕವಿಗಳಿಗೆ ನಮನ ಸಲ್ಲಿಸುವ ನೃತ್ಯಾಂಜಲಿ ಕಾರ್ಯಕ್ರಮ ವಿಶೇಷವಾಗಿ ಪ್ರದರ್ಶನಗೊಳ್ಳಲಿದೆ. ಸುಮಾರು ಒಂದೂವರೆ ಗಂಟೆ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ವಾನ್ ದೀಪಕ್ ಕುಮಾರ್ ದಂಪತಿ ಸಹಿತ 2 ತಂಡಗಳಲ್ಲಿ 15 ಮಂದಿ ಕಲಾವಿದರು ನೃತ್ಯ ಕಲಾ ಪ್ರದರ್ಶನ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here