ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟ-ವಿವೇಕಾನಂದ ಆ.ಮಾ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ

0

ಪುತ್ತೂರು: ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ಅಕ್ಟೋಬರ್ 5, 6 ಮತ್ತು 7 ರಂದು ಹೈದರಾಬಾದ್ ನಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದು 16 ವಿದ್ಯಾರ್ಥಿಗಳು ಬಿಹಾರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಬಾಲಕರ ವಿಭಾಗ,:
ಸಾತ್ವಿಕ್ ಆರ್ 10ನೇ ತರಗತಿ 110 ಮೀಟರ್ ಹರ್ಡಲ್ಸ್ ದ್ವಿತೀಯ ಸಚಿತ್ ಪಿಕೆ 10ನೇ ತರಗತಿ 400 ಮೀಟರ್ ಪ್ರಥಮ, 800 ಮೀಟರ್ ಪ್ರಥಮ. ಅರೀಬ್ ರಯಾನ್10ನೇ ತರಗತಿ ಹ್ಯಾಮರ್ ತ್ರೋ ದ್ವಿತೀಯ. ಮಿಲನ್ 10ನೇ ತರಗತಿ ಗುಂಡು ಎಸೆತ ಪ್ರಥಮ ಹಾರ್ದಿಕ್ ಹತ್ತನೇ ತರಗತಿ 5000 ಮೀಟರ್  ನಡಿಗೆ ದ್ವಿತೀಯ

17ರ ವಯೋಮಾನದ ಬಾಲಕಿಯರ ವಿಭಾಗ :
ಸಮೃದ್ಧಿ ಜೆ ಶೆಟ್ಟಿ 10ನೇ ತರಗತಿ ಹರ್ಡಲ್ಸ್ ಪ್ರಥಮ, ಎತ್ತರ ಜಿಗಿತ ದ್ವಿತೀಯ ಮತ್ತು ಉದ್ದ ಜಿಗಿತ ದ್ವಿತೀಯ. ಸಾನ್ವಿ ಎಸ್ ಪಿ 10ನೇ ತರಗತಿ ತ್ರಿವಿಧ ಜಿಗಿತ ಪ್ರಥಮ.  ರಿಧಿ ಸಿ ಶೆಟ್ಟಿ 400 ಮೀಟರ್ ದ್ವಿತೀಯ, 800 ಮೀಟರ್ ದ್ವಿತೀಯ, 400 ಮೀಟರ್ ಹರ್ಡಲ್ಸ್ ದ್ವಿತೀಯ. ಎಂ ಪವಿತ್ರ ಹತ್ತನೇ ತರಗತಿ ಹ್ಯಾಮರ್ ತ್ರೋ ಪ್ರಥಮ. ಡಿಂಪಲ್ ಶೆಟ್ಟಿ 9ನೇ ತರಗತಿ  400 ಮೀಟರ್ ಪ್ರಥಮ, 200 ಮೀಟರ್ ದ್ವಿತೀಯ ಮತ್ತು 100 ಮೀಟರ್ ದ್ವಿತೀಯ. ಕೃತಿ ಕೆ 9ನೇ ತರಗತಿ 800 ಮೀಟರ್ ಪ್ರಥಮ, 1500 ಮೀಟರ್ ಪ್ರಥಮ, 3000 ಮೀಟರ್ ಪ್ರಥಮ ಹಾಗೂ ವೈಯಕ್ತಿಕ ಚಾಂಪಿಯನ್ ಆಗಿರುತ್ತಾರೆ. ಅಮೃತಾ ಬಿ.ಎ 9ನೇ ತರಗತಿ 1500 ಮೀಟರ್ ದ್ವಿತೀಯ, 3000 ಮೀಟರ್ ದ್ವಿತೀಯ.

14ರ ವಯೋಮಾನದ ಬಾಲಕರ ವಿಭಾಗ :
ಚೇತಸ್ ಪಿ ವೈ 8ನೇ ತರಗತಿ 600 ಮೀಟರ್ ಪ್ರಥಮ 400 ಮೀಟರ್ ದ್ವಿತೀಯ.

14ರ ವಯೋಮಾನದ ಬಾಲಕಿಯರ ವಿಭಾಗ :
ದಿವಿಜ್ಞ ಯು ಎಸ್ 8ನೇ ತರಗತಿ 200 ಮೀಟರ್ ಪ್ರಥಮ, 400 ಮೀಟರ್ ಪ್ರಥಮ, 800 ಮೀಟರ್ ಪ್ರಥಮ, ಹಾಗೂ ವೈಯಕ್ತಿಕ ಚಾಂಪಿಯನ್ ಆಗಿರುತ್ತಾರೆ. ಚಿಂತನ 8ನೇ ತರಗತಿ 100 ಮೀಟರ್ ಹರ್ಡಲ್ಸ್ ದ್ವಿತೀಯ. ಸಾನ್ವಿ ಜೆ 7ನೇ ತರಗತಿ ಗುಂಡು ಎಸೆತ ದ್ವಿತೀಯ ಸ್ಥಾನವನ್ನು ಪಡೆದಿ ರುತ್ತಾರೆ.  ಎಂದು ಶಾಲಾ ಮುಖ್ಯ ಗುರುಗಳಾದ ಶ್ರೀಯುತ ಸತೀಶ್ ಕುಮಾರ್ ರೈಯವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here