ನ.3: ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

0

ಪುತ್ತೂರು: ರೈಲ್ವೇ ಖಾಸಗೀಕರಣ ವಿರೋಧಿಸಿ ದೇಶದಾದ್ಯಂತ ನ. 3 ರಂದು ಜೆಸಿಟಿಯು, ರೈತ ಸಂಯುಕ್ತಮೋರ್ಚ ಹಾಗೂ ಇತರ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜಂಟಿಯಾಗಿ ನಡೆಯಲಿದೆ.ಪುತ್ತೂರಿನಲ್ಲೂ ಪುತ್ತೂರು ರೈಲು ನಿಲ್ದಾಣದ ಮುಂಭಾಗದಲ್ಲಿ ನಡೆಯಲಿದೆ.


ರೈಲ್ವೇ ಖಾಸಗೀಕರಣ ವಿರುದ್ಧ ಮತ್ತು ತಿರುವಂತಪುರಂದಿಂದ ಕಾಸರಗೋಡು ತನಕ ಬಂದು ಹೋಗುತ್ತಿರುವ ’ವಂದೇ ಮಾತರಂ’ ಮಂಗಳೂರು ತನಕ ಬಂದು ಹೋಗುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು. ಈ ಹೋರಾಟವನ್ನು ಸಿಪಿಐ(ಎಂ) ಪುತ್ತೂರು ತಾಲೂಕು ಸಮಿತಿ ಬೆಂಬಲಿಸಲಿದೆ ಎಂದು ಪುತ್ತೂರು ತಾಲೂಕು ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಪಿ.ಕೆ.ಸತೀಶನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here