ಮಾರುತಿ ಕಾರುಗಳ ಅಧಿಕೃತ ಸೇವಾ ಸಂಸ್ಥೆ ನ್ಯೂ ರತ್ನ ಮೋಟಾರ್ಸ್ ನಲ್ಲಿ ಆಯುಧ ಪೂಜೆ

0

ಪುತ್ತೂರು : ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯ ಪುಳಿತ್ತಡಿ ಸಮೀಪವಿರುವ ರತ್ನ ಸಂಕೀರ್ಣದಲ್ಲಿ ಗಂಗಾಧರ್ ಹಿರಿಂಜ ಹಳೆನೇರೆಂಕಿ ಹಾಗೂ ವಸಂತ್ ಉಪ್ಪಿನಂಗಡಿ ಇವರ ಪಾಲುದಾರಿಕೆಯ ಮಾರುತಿ ಕಾರುಗಳ ಎಲ್ಲಾ ರೀತಿಯ ಸೇವೆಯನ್ನೊಳಗೊಂಡ ಅಧಿಕೃತ ಸೇವಾ ಸಂಸ್ಥೆ ನ್ಯೂ ರತ್ನ ಮೋಟಾರ್ಸ್ ನಲ್ಲಿ ಅ.23ರಂದು ಆಯುಧ ಪೂಜಾ ಕಾರ್ಯಕ್ರಮ ಜರುಗಿತು.


ಪುರೋಹಿತ ಸುಬ್ರಹ್ಮಣ್ಯ ದೇವಾ ಪೂಜಿತ್ತಾಯ ಪೂಜಾ ಕೈಂಕರ್ಯ ನೆರವೇರಿಸಿ, ಸಂಸ್ಥೆಯ ಶ್ರೆಯೋಭಿವೃದ್ದಿಗೆ ಹಾರೈಸಿದರು.
ಸಂಕೀರ್ಣ ಮಾಲಕ ಜಯಂತ್ ಕೊಯಿಲ, ಉದ್ಯಮಿ ಕೀರ್ತನ್ ಶೆಟ್ಟಿ ಕೊಯಿಲ ಸಹಿತ ಸಂಸ್ಥೆಯ ಗ್ರಾಹಕ ಬಂಧುಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಕುಟುಂಬ ವರ್ಗದವರು ಹಾಜರಿದ್ದರು. ಪಾಲುದಾರರಾದ ಗಂಗಾಧರ್ ಮತ್ತು ವಸಂತ್ ಎಲ್ಲರನ್ನೂ ಸ್ವಾಗತಿಸಿ, ಸತ್ಕರಿಸಿ, ವಂದಿಸಿದರು.

ಸಂಸ್ಥೆಯಲ್ಲಿ ಲಭ್ಯ ಸೇವೆ : ಅದ್ಬುತ ಅನುಭವವುಳ್ಳ ತಂಡದಿಂದ ಟಿಂಕರಿಂಗ್ ಆ್ಯಂಡ್ ಪೈಂಟಿಂಗ್ ವರ್ಕ್, ಎ.ಸಿ ವರ್ಕ್ , ಮೆಕ್ಯಾನಿಕಲ್, ಬಾಡಿ ರಿಪೇರಿ, ಕಾರ್ ವಾಶಿಂಗ್, ಎಮಿಷನ್ ಟೆಸ್ಟ್ ,ಇನ್ಸೂರೆನ್ಸ್ ಜೊತೆಗೆ ಎಲ್ಲಾ ರೀತಿಯ ಟಯರ್ ಸರ್ವೀಸ್ ಸೇವೆಗಳೂ ಗುಣಮಟ್ಟ ಹಾಗೂ ಯೋಗ್ಯ ದರದೊಂದಿಗೆ ಸದಾ ಲಭ್ಯವಿದೆ.
9632261706,9741352055

LEAVE A REPLY

Please enter your comment!
Please enter your name here