ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದ ನೇಮೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಕ್ಕುಮುಗೇರು ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಭಕ್ತಾಧಿಗಳ ಸಭೆಯು ದ.17 ರಂದು ರಾಜಮಾಡ ಬೊಳ್ಳಾಡಿಯಲ್ಲಿ ನಡೆಯಿತು. ಸಭೆಯು ದೈವಸ್ಥಾನದ ಮೊಕ್ತೇಸರರುಗಳಾದ ಎ. ಚಿಕ್ಕಪ್ಪ ನಾಕ್ ಅರಿಯಡ್ಕ ಮತ್ತು ಎ ಜಿ ವಿಜಯ ಕುಮಾರ್ ರೈ ಮುಗೇರು ಇವರ ಉಪಸ್ಥಿತಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಕುಂಬ್ರ ದುರ್ಗಾಪ್ರಸಾದ್ ರೈ, ರಕ್ಷಿತ್ ರೈ ಮುಗೇರು, ಶ್ರೀನಿವಾಸ ರೈ, ವೆಂಕಪ್ಪ ಗೌಡ ಬೊಳ್ಳಾಡಿ ಬೆಂಗಳೂರು, ರಾಜೇಶ್ ರೈ ಪರ್ಪುಂಜ, ತಾರಾನಾಥ ಬೊಳ್ಳಾಡಿ, ಶಿವರಾಮ ಗೌಡ, ಜಗನ್ನಾಥ ಪೂಜಾರಿ ಮುಡಾಲ, ಶೀನಪ್ಪ ನಾಯ್ಕ ಬೊಳ್ಳಾಡಿ, ಪ್ರಜ್ಷಲ್ ರೈ ಕೈಕಾರ, ನಾರಾಯಣ ಗೌಡ ಉರ್ವ, ತಾರಾನಾಥ ಶೆಟ್ಟಿ ಮುಡಾಲ, ಪುರಂದರ ಶೆಟ್ಟಿ ಮುಡಾಲ, ಸೀತಾರಾಮ ರೈ ಮುಡಾಲ, ಚೋಮ ಉರ್ವ, ತಿಮ್ಮ ಉರ್ವ,ಮಹೇಶ್ ರೈ ಕೇರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಸ್ವಾಗತಿಸಿ ವಂದಿಸಿದರು.
ಜ.29ರಿಂದ ನೇಮೋತ್ಸವ ಕುಕ್ಕುಮುಗೇರು ಶ್ರೀ ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವವು ರಾಜಮಾಡ ಬೊಳ್ಳಾಡಿಯಲ್ಲಿ ಜ.29 ರಿಂದ ಆರಂಭಗೊಂಡು ಫೆ.3 ರ ತನಕ ವಿಜೃಂಭಣೆಯಿಂದ ಜರಗಲಿದೆ.

LEAVE A REPLY

Please enter your comment!
Please enter your name here