ಮಾಡಾವು ಶ್ರೀ ಕ್ಷೇತ್ರ ಕೊರಗಜ್ಜನ ಸನ್ನಿದಿಗೆ ಊರ ದಾನಿಗಳಿಂದ ಮೇಲ್ಚಾವಣಿ ಕೊಡುಗೆ ಮತ್ತು ದಂಡೆ ಹಸ್ತಾಂತರ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಶ್ರೀ ಕೊರಗಜ್ಜ ಕ್ಷೇತ್ರ ಮಾಡಾವಿನಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಪುರೋಹಿತ ಕಿಶೋರ್ ಭಟ್ ಅರ್ತ್ಯಡ್ಕ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ ನಡೆದು ಊರ ದಾನಿಗಳ ಸಹಾಯದಿಂದ ನೀಡಲ್ಪಟ್ಟ ಶ್ರೀ ಕೊರಗಜ್ಜನಿಗೆ ಮೇಲ್ಚಾವಣಿ ಮತ್ತು ವಸಂತ ಕಾವು ಅವರು ಕೊರಗಜ್ಜನಿಗೆ ನೀಡಿದ ದಂಡೆಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮೇಲ್ಚಾವಣಿಯ ಕೆಲಸ ನಿರ್ಮಿಸಿದ ಕೆಲಸಗಾರರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಮಾರ್ತ, ಅಶೋಕ ಪುತ್ತಿಲ, ಗೋಪಿನಾಥ ರೈ ಬೈಲಮೂಲೆ, ಸುಬ್ರಮಣ್ಯ ರೈ ಮಠ, ಕೆಯ್ಯೂರು ಗ್ರಾ.ಪಂ.ಸದಸ್ಯೆ ಮೀನಾಕ್ಷಿ ವಿ.ರೈ, ವಸಂತ ರೈ ಮಾಡಾವು, ದಿವಾಕರ ಪೂಜಾರಿ ಪಲ್ಲತ್ತಡ್ಕ,  ಕ್ಷೇತ್ರದ ಅರ್ಚಕ ರಮೇಶ ಮುಗೇರ, ಮತ್ತು ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here