ರಾಮಕುಂಜ: ಖೇಲೋ ಇಂಡಿಯಾ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗ್ರಾ.ಪಂ.ನಿಂದ ಸನ್ಮಾನ

0

ರಾಮಕುಂಜ: ಖೇಲೋ ಇಂಡಿಯಾ ತಂಡಕ್ಕೆ ಆಯ್ಕೆಯಾದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರಾದ ಕಾರ್ತಿಕ್ ಮತ್ತು ಹಿತೇಶ್ ಎನ್.ಕೆ., ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈಯವರನ್ನು ರಾಮಕುಂಜ ಗ್ರಾ.ಪಂ.ವತಿಯಿಂದ ಜ.17ರಂದು ಗ್ರಾ.ಪಂ.ಸಭಾಂಗಣದಲ್ಲಿ ಸನ್ಮಾನಿಸಲಾಯಿತು.


ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬಿ., ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಮಾಲತಿ ಎನ್.ಕೆ., ರೋಹಿಣಿ, ಭವಾನಿ, ಜಯಶ್ರೀ, ಭಾರತಿ, ಸೂರಪ್ಪ ಕುಲಾಲ್, ಹೆಚ್.ಅಬ್ದುಲ್ ರಹಿಮಾನ್, ಕುಶಾಲಪ್ಪ, ವಸಂತ, ಪಿಡಿಒ ಲಲಿತ ಜಿ.ಡಿ.,ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here