ಲಕ್ಷ್ಮೀನಗರ ನಿವಾಸಿ ಹರೀಶ ಬಂಡಾರಿ ನಿಧನ

0

ಉಪ್ಪಿನಂಗಡಿ: ಇಲ್ಲಿನ ಲಕ್ಷ್ಮೀನಗರ ನಿವಾಸಿ ಹರೀಶ ಬಂಡಾರಿ (45) ಫೆ.6ರಂದು ಹೃದಯಾಘಾತದಿಂದ ನಿಧನರಾದರು.
ಗಾರೆ ಮೇಸ್ತ್ರಿಯಾಗಿರುವ ಹರೀಶ್ ಅವರು ಇಂದು ರಾಮನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಉಪ್ಪಿನಂಗಡಿಯ ಕ್ಲಿನಿಕ್‌ವೊಂದಕ್ಕೆ ಅವರನ್ನು ಕರೆತಂದಿದ್ದು, ಅಲ್ಲಿ ಅವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಮೃತರು ಪತ್ನಿ, 11 ವರ್ಷದ ಪುತ್ರ, ಸಹೋದರನಾದ ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ರಮೇಶ್ ಬಂಡಾರಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಮೃತರ ತಾಯಿ ಕೆಲವು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು.

LEAVE A REPLY

Please enter your comment!
Please enter your name here