ಬಡಗನ್ನೂರು ಗ್ರಾ.ಪಂ ಗೆ ಸಂವಿಧಾನ ಜಾಥಾ ರಥ

0

ಬಡಗನ್ನೂರುಃ  ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ರಥವು ಫೆ.16 ರಂದು ಬಡಗನ್ನೂರು ಗ್ರಾಮ ಪಂಚಾಯತಿಗೆ ಆಗಮಿಸುವ ಸಂದರ್ಭದಲ್ಲಿ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.

ಕಟ್ಟಾವು ಪ್ರದೇಶದಿಂದ  ಜಾಥ ರಥವನ್ನು ಸ್ವಾಗತಿಸಿ  ಗ್ರಾ.ಪಂ ವರೆಗೆ ಸುಮಾರು 200 ಮೀಟರ್ ವಿಜೃಂಭಣೆಯಲ್ಲಿ ಮೆರವಣಿಗೆ ಮೂಲಕ ಗ್ರಾ.ಪಂ ಆವರಣಕ್ಕೆ ಬಂದು ಸಭಾ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ  ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಥಾಕ್ಕೆ ಚಾಲನೆ ನೀಡಿದರು. ಅಧ್ಯಕ್ಷೆ  ಪುಷ್ಪಲತಾ  ಉಪಾಧ್ಯಕ್ಷೆ  ಸುಶೀಲ ಪಕ್ಯೋಡ್, ಸದಸ್ಯರುಗಳಾದ ಸಂತೋಷ್ ಆಳ್ವ ಗಿರಿಮನೆ, ವೆಂಕಟೇಶ್ ಸುಳ್ಯಪದವು, ಕುಮಾರ ಅಂಬಟೆಮೂಲೆ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣ ಸಂವಿಧಾನ ಜಾಗೃತಿ ಜಾಥಾದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ,ಸಂವಿದಾನ ಪೀಠಿಕೆ ವಾಚಿಸಿದರು. ಭೂದಾಖಲಾತಿ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕುಂಬ್ರ ಕ್ಲಸ್ಟರ್ ಸಿ.ಆರ್ .ಪಿ ಶಶಿಕಲಾ ಬಹುಮಾನ ವಿತರಣೆ ಮಾಡಿದರು. ಗ್ರಾ.ಪಂ ಸದಸ್ಯರಾದ ಸಂತೋಷ್ ಆಳ್ವ ಸ್ವಾಗತಿಸಿ, ಕುಮಾರ ಅಂಬಟೆಮೂಲೆ ವಂದಿಸಿದರು. ಕೊಯಿಲ ಬಡಗನ್ನೂರು ಶಾಲಾ ಸಹ ಶಿಕ್ಷಕ ಗಿರೀಶ್  ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here