ವಿಟ್ಲ : ಕೂಲಿ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

0

ವಿಟ್ಲ: ನಲ್ವತ್ತು ಅಡಿ ಎತ್ತರದ ಮರವೇರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದೆ.ಕೂಲಿ ಕಾರ್ಮಿಕ ಸ್ಥಳೀಯ ನಿವಾಸಿ ಜಾರಪ್ಪ ನಾಯ್ಕ (60) ಆತ್ಮಹತ್ಯೆ ಮಾಡಿಕೊಂಡವರು.ಒರ್ವರ ಮನೆಯ ತೋಟದ ಕೆಲಸಕ್ಕೆ ಹೋಗಬೇಕಾಗಿದ್ದವರು ಅಲ್ಲಿಗೆ ತಲುಪದೆ ಇದ್ದಾಗ ,ಆ ಮನೆಯವರು ಕೆಲಸಕ್ಕೆ ಬಂದಿಲ್ಲದ ಕಾರಣ ಜಾರಪ್ಪ ನಾಯ್ಕರ ಮನೆಯವರಲ್ಲಿ ವಿಚಾರಿಸಿದಾಗ ಬೆಳಿಗ್ಗೆಯೇ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಸಂಶಯ ಕಾಡಿ ಹುಡುಕಾಡಿದಾಗ ತೋಟದೊಳಗಿನ ಸುಮಾರು ನಲ್ವತ್ತು ಅಡಿ ಎತ್ತರದ ಮರದಲ್ಲಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಬಳಿಕ ವಿಟ್ಲ ಪೊಲೀಸರ ಸಮಕ್ಷಮದಲ್ಲಿ ಮೃತ ಶರೀರವನ್ನು ಕೆಳಕ್ಕಿಳಿಸಿದರು. ಈ ಘಟನೆಯ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here