ಕರ್ವೇಲಿನಲ್ಲಿ ಮೂವರ ಅಕಾಲಿಕ ಮರಣ-ನೊಂದ ಕುಟುಂಬಗಳಿಗೆ ಪದ್ಮರಾಜ್ ಆರ್. ಸಾಂತ್ವನ

0

ಉಪ್ಪಿನಂಗಡಿ: ಕಳೆದ 20 ದಿನಗಳ ಅಂತರದಲ್ಲಿ 34 ನೆಕ್ಕಿಲಾಡಿ ಗ್ರಾಮದ ಕರ್ವೇಲಿನಲ್ಲಿ ಮೂವರು ಅಕಾಲಿಕವಾಗಿ ಮರಣ ಹೊಂದಿದ್ದು, ಇವರ ಮನೆಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಪದ್ಮರಾಜ್ ಆರ್. ಅವರು ಮಾ.4ರಂದು ಭೇಟಿ ನೀಡಿ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದರು.


ಕರ್ವೇಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಹಫೀಝಾ ಹೃದಯಾಘಾತದಿಂದ ನಿಧನರಾದರೆ, ತಾಜುಲ್ ಉಲೇಮಾ ಎಜ್ಯುಕೇಶನ್ ಗಾರ್ಡನ್‌ನ ಅಧ್ಯಕ್ಷರಾದ ಸಾದತ್ ಅಲಿ ತಂಙಳ್ ವಾಹನ ಅಪಘಾತದಿಂದ ಮೃತಪಟ್ಟಿದ್ದರು. ಮುಹಮ್ಮದ್ ಮುಸ್ತಾಫ ಅವರು ನಿರ್ಮಾಣ ಹಂತದ ಮನೆಯ ಮೇಲಿನಿಂದ ಬಿದ್ದು ಸಾವೀಗೀಡಾಗಿದ್ದರು. ಇವರ ಮನೆಗಳಿಗೆ ತೆರಳಿದ ಪದ್ಮರಾಜ್ ಆರ್. ಅವರು ಅವರ ಕುಟುಂಬಗಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಕಾಂಗ್ರೆಸ್ ಪ್ರಮುಖರಾದ ನವಾಝ್ ಕರ್ವೇಲು, ರಜಾಕ್, ತನಿಯಪ್ಪ ಪೂಜಾರಿ, ಹಕೀಮ್, ಬಾಳಪ್ಪ ಶಾಂತಿನಗರ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸಿನಾನ್, ನಿಜಾಮ್ ಕೆ. ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here