ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವಕ್ಕೆ ಗೊನೆಮುಹೂರ್ತ

0

ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವಕ್ಕೆ ಗೊನೆಮುಹೂರ್ತ ಮಾ.15ರಂದು ಬೆಳಿಗ್ಗೆ ನೆರವೇರಿಸಲಾಯಿತು.
ಮಾ.22 ಮತ್ತು 23ರಂದು ಶ್ರಿ ದೇವಳದ ಜಾತ್ರೋತ್ಸವ ನಡೆಯಲಿದ್ದು, ಗೊನೆ ಮುಹೂರ್ತವನ್ನು ಬನ್ನೂರು ಗೋಳ್ತಿಲ ಈಶ್ವರ ಗೌಡ ಅವರ ತೋಟದಲ್ಲಿ ದೇವಳದ ಅರ್ಚಕ ಶಿವಪ್ರಸಾದ್ ಭಟ್ ಅವರು ನೆರವೇರಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಸದಸ್ಯ ಈಶ್ವರ ಗೌಡ ಗೋಳ್ತಿಲ, ಮಾಜಿ ಅಧ್ಯಕ್ಷ ಧರ್ಣಪ್ಪ ಮೂಲ್ಯ ಕಜೆ ಸಹಿತ ಸಮಿತಿ ಸದಸ್ಯರು ಮತ್ತು ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here