ಮಾ.19 ರಂದು ಆಲಂಕಾರು ಕೋಟಿ ಚೆನ್ನಯ ಮಿತೃವೃಂದದಿಂದ ಶರವೂರು ಜಾತ್ರೋತ್ಸವ ಪ್ರಯುಕ್ತ 16 ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ

0

ಆಲಂಕಾರು:ಕೋಟಿ ಚೆನ್ನಯ ಮಿತೃವೃಂದ ಆಲಂಕಾರು ಇವರಿಂದ ಮಾ.19 ರಂದು ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ಆಲಂಕಾರು ಪೇಟೆಯಲ್ಲಿ 16 ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸಭಾ ಕಾರ್ಯಕ್ರಮ ನಡೆಯಲಿದೆ.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲಂಕಾರು ಕೋಟಿ ಚೆನ್ನಯ ಮಿತೃವೃಂದದ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ ವಹಿಸಲಿದ್ದು.ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಂದಾಳು ಸತ್ಯಜಿತ್‌ ಸುರತ್ಕಲ್,ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಗುತ್ತು,ಕಡಬ ಉಪತಹಶೀಲ್ದಾರ್ ಗೋಪಾಲ.ಕೆ,ಆಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ ರೈ ಮನವಳಿಕೆ, ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ ಕೊಂಡಾಡಿಯವರು ಭಾಗವಹಿಸಲಿದ್ದು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ತಾಂಬೂಲ ಕಲಾವಿದೆರ್ ಪೂಂಜಾಲಕಟ್ಟೆ ಕುಡ್ಲ ಇವರಿಂದ ಪರಿಮಳ ಕಾಲನಿ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದು ಕೋಟಿ ಚೆನ್ನಯ ಮಿತೃವೃಂದ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ, ಸಂಚಾಲಕ ರವಿ‌ಮಾಯಿಲ್ಗ,ಕಾರ್ಯದರ್ಶಿ ಧನಂಜಯ ನೈಯ್ಯಲ್ಗ,ಉಪಾಧ್ಯಕ್ಷ ಕೇಶವ ಕೇಪುಳು,ಕೋಶಾಧಿಕಾರಿ ವಿನಯ ಕೆದಿಲ,ಗೌರವಾಧ್ಯಕ್ಷ ಗಣರಾಜ್ ಆಲಂಕಾರು, ಜೊತೆ ಕಾರ್ಯದರ್ಶಿ ಡೊಂಬಯ್ಯ ಸಾಂತ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here