ನೆಲ್ಲಿಕಟ್ಟೆ ನಾಗದೇವರ ಸನ್ನಿಧಿಯಲ್ಲಿ 21ನೇ ವರ್ಷದ ಆಶ್ಲೇಷಬಲಿ, ನಾಗತಂಬಿಲ, ಮಹಾಪೂಜೆ

0

ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್‌ನಿಲ್ದಾಣದ ಬಳಿಯ ನಾಗದೇವರ ಸನ್ನಿಧಿಯಲ್ಲಿ 21ನೇ ವಾರ್ಷಿಕ ಮಹಾಪೂಜೆ ಮಾ.19ರಂದು ಕೀರ್ತಿಶೇಷ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರ ಆಶೀರ್ವಾದೊಂದಿಗೆ ಅವರ ಪುತ್ರ ವೇ.ಮೂ ಅನಂತರಾಮ ಜೋಗಿತ್ತಾಯ ಅವರ ನೇತೃತ್ವದಲ್ಲಿ ನಡೆಯಿತು.

ಬೆಳಿಗ್ಗೆ ನಾಗತಂಬಿಲ, ಆಶ್ಲೇಷ ಬಲಿ, ಭಜನಾ ಕಾರ್ಯಕ್ರಮ ಹಾಗೂ ಮಹಾಪೂಜೆ ಸೇವಾ ಪ್ರಸಾದ ಮಾಡಿದ ಭಕ್ತರಿಗೆ ಸಂಕಲ್ಪ ಮೂಲಕ ಪ್ರಾರ್ಥನೆ ಮಾಡಿ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾವಿರಾರು ಮಂದಿ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here