ಬೊಳುವಾರು ಬಾಬುರಾಯ್ ಹೊಟೇಲ್ ನಲ್ಲಿ ಚಹಾ ಸವಿದ ಡಿವಿಎಸ್

0

ಇನ್ನು ಪುತ್ತೂರಿನ ಹಳೆ ಒಂದೊಂದು ಕಡೆ ಕೆಲಸ ಕಾರ್ಯಕ್ಕೆ ಹೋಗಲು ಪ್ರಾರಂಭ

ಪುತ್ತೂರು: ಇನ್ನು ಪುತ್ತೂರಿನ ಹಳೆ ಒಂದೊಂದು ಕಡೆ ಕೆಲಸ ಕಾರ್ಯಕ್ಕೆ ಹೋಗಲು ಪ್ರಾರಂಭ. ಅದು ಬಾಬುರಾಯ್ ಹೊಟೇಲ್ ನಿಂದ ಆರಂಭ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದ್ದಾರೆ.

ಹೊಸತಾಗಿ ನವೀಕೃತಗೊಂಡ ಹೊಟೇಲ್ ಗೆ ಮತ್ತೊಮ್ಮೆ ಭೇಟಿ ನೀಡಿದ ಡಿ.ವಿ.ಸದಾನಂದ ಗೌಡ ಚಹಾ ಸವಿದು ತಿಂಡಿ ತಿಂದ ಬಳಿಕ ಅವರು ಪತ್ರಿಕಾ ಮಾಧ್ಯಮದ ಜೊತೆ ಪುತ್ತೂರಿನಲ್ಲಿ ರಾಜಕೀಯ ಆರಂಭಿಸಿದ ಸಂದರ್ಭ ಪುತ್ತೂರಿನ ಬೊಳುವಾರಿನ ಚಹಾ ಕುಡಿಯುವ ಮಾಮೂಲಿ ಹೊಟೇಲ್ ಬಾಬರಾಯ್ ಎಂದು ನೆನಪಿಸಿಕೊಂಡು ಮಾತನಾಡಿದರು. ಕಳೆದ 35 ವರ್ಷಗಳಿಂದ ಬಾಬು ರಾಯ್ ಹೊಟೇಲ್ ಗೂ ನನಗೂ ನಂಟಿತ್ತು. ಬೆಳಿಗ್ಗೆ ಇಡ್ಲಿ ತೋವೆ, ಸಣ್ಣ ದೋಸೆಯ ಮೂಲಕ ಬಾಬು ರಾಯ್ ಹೊಟೇಲ್ ಪುತ್ತೂರಿಗೆ ಫೇಮಸ್. ಇವತ್ತು ಹೊಟೇಲ್ ನವೀಕೃತಗೊಂಡಾಗ ಮತ್ತೊಮ್ಮೆ ಬಂದಿದ್ದೆ‌ನೆ. ಇವತ್ತು ಚುನಾವಣಾ ರಾಜಕಾರಣದಿಂದ ದೂರ ಇರುವ ಕಾರಣ ನಾನು ಫ್ರೀ ಇದ್ದೆನೆ. ಇನ್ನು ಪುತ್ತೂರಿನ ಹಳೆ ಒಂದೊಂದು ಕಡೆ ಕೆಲಸ ಕಾರ್ಯಕ್ಕೆ ಹೋಗಲು ಪ್ರಾರಂಭ ಮಾಡಲಿದ್ದೆನೆ. ಅದಕ್ಕೆ ಬಾಬು ರಾಯ್ ಹೊಟೇಲ್ ನಿಂದಲೆ ಪ್ರಾರಂಭ ಎಂದ ಅವರು ಇವತ್ತು ಹಳೆ ನೆನಪುಗಳು ಹೊಸ ನೆನಪಿಗಿಂತ ಹೆಚ್ಚಾಗಿ ಒಳ್ಳೆದು ಎಂದು ಹಿರಿಯರು ಹೇಳಿರುವುದು ನೆನಪಾಗಿದೆ ಎಂದರು.


ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಅಜಿತ್ ರೈ ಹೊಸಮನೆ, ಮನೀಶ್ ಬಿರ್ವ, ರಂಜಿತ್, ಕಿರಣ್ ಬಲ್ನಾಡು, ಶಿವಪ್ರಸಾದ್ ಮಯ್ಯ, ಸಚಿನ್ ಶೆಣೈ, ಗಣೇಶ್ ಬಾಳಿಗ, ಧರ್ಣಪ್ಪ ಗೌಡ, ಹೇಮಂತ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಬಾಬುರಾಯ್ ಹೊಟೇಲ್ ಮಾಲಕ ಶಿವಾನಂದ ಪ್ರಭು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಚಹಾ ನೀಡಿದರು.

LEAVE A REPLY

Please enter your comment!
Please enter your name here