ಬಾವಿ ಸ್ವಚ್ಛಗೊಳಿಸುತ್ತಿರುವಾಗ ಬಾವಿಗೆ ಬಿದ್ದು ಕಾರ್ಮಿಕ ಮೃತ್ಯು-ಮನೆಮಾಲಕ ದೋಷ ಮುಕ್ತ

0

ಪುತ್ತೂರು :ಮನೆಯಲ್ಲಿ ಬಾವಿ ಸ್ವಚ್ಛಗೊಳಿಸುತ್ತಿರುವಾಗ ಬಾವಿಗೆ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕನನ್ನು ದೋಷ ಮುಕ್ತಗೊಳಿಸಿ ಪುತ್ತೂರು ನ್ಯಾಯಾಲಯವು ತೀರ್ಪು ನೀಡಿದೆ.


ದಿನಾಂಕ 19.04.2017 ರಂದು ಕೌಕ್ರಾಡಿ ಗ್ರಾಮದ ಕುರಿಯಕೋಸ್ ಯಾನೆ ಶಿಬು ಎಂಬವರ ಮನೆಯ ಬಾವಿಯನ್ನು ಕೆ. ಬಾಬು ಎಂಬವರು ಸ್ವಚ್ಛಗೊಳಿಸುತ್ತಿರುವಾಗ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೇಳಿ ಹಗ್ಗದ ಸಹಾಯದಲ್ಲಿ ಮೇಲೆ ಬರುತ್ತಿರುವಾಗ ಹಗ್ಗ ತುಂಡಾಗಿ ಬಾಬುರವರು ಬಾವಿಗೆ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಈ ಬಗ್ಗೆ ಮೃತನ ಅಣ್ಣ ಕೆ.ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಮನೆ ಮಾಲಕ ಶಿಬುರವರ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿಬು ರವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾಣೆ ನಡೆಸಿದ ಪುತ್ತೂರು ನ್ಯಾಯಾಲಯವು ಆರೋಪಿ ಶಿಬು ರವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಎಸ್ ಪ್ರವೀಣ್ ಕುಮಾರ್, ಸುಶ್ಮಿತಾ ವೈ.ಎಲ್. ಮತ್ತು ಅರ್ಚನಾ ಬಿ.ಸಿ. ರವರು ವಾದಿಸಿದ್ದರು.

LEAVE A REPLY

Please enter your comment!
Please enter your name here