ಪುತ್ತೂರು: ರಾಜ್ಯದಾದ್ಯಂತ ನಡೆಯುತ್ತಿರುವ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 187 ರಲ್ಲಿ ನಡೆಸಲಾಯಿತು.
![](https://puttur.suddinews.com/wp-content/uploads/2024/04/77d42e8b-3519-4fe3-ae01-1b6669a4fc10.jpg)
![](https://puttur.suddinews.com/wp-content/uploads/2024/04/dc094bfd-f5e3-4448-8ce1-c9ed5ff5b649.jpg)
ಈ ಅಭಿಯಾನದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕೆದಂಬಾಡಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು, ಬೂತ್ ಅಧ್ಯಕ್ಷರು, ಪ್ರ. ಕಾರ್ಯದರ್ಶಿ, ಕಾರ್ಯದರ್ಶಿಯವರು, ಬೂತ್ ಪ್ರವಾಸಿ ಪ್ರಭಾರಿಗಳು, ಗ್ರಾಮದ ಬಿಜೆಪಿ ಉಸ್ತುವಾರಿಯವರು, ಯುವ ಮೋರ್ಚಾದ ಸಂಚಾಲಕರು, ಪಂಚಾಯತ್ ಮಾಜಿ ಅಧ್ಯಕ್ಷರು ಸೇರಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.ಒಟ್ಟು 74 ಮನೆಗಳ ಸಂಪರ್ಕ ಮಾಡಲಾಯಿತು, 20 ಕ್ಕೂ ಅಧಿಕ ಕಾರ್ಯಕರ್ತರು ಈ ಯಶಸ್ವಿ ಅಭಿಯಾನದಲ್ಲಿ ಭಾಗವಹಿಸಿದ್ದರು.