ದೂರು ನೀಡಲು ಅಸ್ತಿತ್ವದಲ್ಲಿಲ್ಲದ ದೂರವಾಣಿ-ಪುತ್ತೂರು ಭೂ ಮಾಪನ ಇಲಾಖೆಯ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ

0

ಪುತ್ತೂರು: ಸರ್ವೆ ಇಲಾಖೆಯಲ್ಲಿನ ಅರ್ಜಿಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬದ ಬಗ್ಗೆ ದೂರು ನೀಡಲು ಪುತ್ತೂರು ಸರ್ವೆ ಇಲಾಖೆಯಲ್ಲಿ ಅಸ್ತಿತ್ವದಲ್ಲಿಲ್ಲದ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲಾಗಿದೆ ಎಂದು ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ದಾಖಲೆಗಳ ಜಿಲ್ಲಾ ಉಪನಿರ್ದೇಶಕರಿಗೆ ದೂರು ನೀಡಲಾಗಿದೆ.



ಇಲ್ಲಿನ ಕಚೇರಿಯಲ್ಲಿ ಸರಕಾರ ಪ್ರಕಟಿಸಿರುವ ದೂರವಾಣಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುತ್ತಾ ಇಲ್ಲ. ಈ ಕಚೇರಿಯಲ್ಲಿ ಸಾರ್ವಜನಿಕರು ಪ್ರತಿನಿತ್ಯ ಅನಗತ್ಯ ವಿಳಂಬ ಅನುಭವಿಸಬೇಕಾಗಿದೆ. ಪ್ರಾಮಾಣಿಕ ಅರ್ಜಿದಾರರು ಇಲ್ಲಿ ಸಂಕಷ್ಟ ಪಡಬೇಕಾಗಿದೆ. ಈ ಬಗ್ಗೆ ಸರಕಾರ ಪ್ರಕಟಿಸಿದ ದೂರವಾಣಿ ಕೂಡ ಜನರ ಉಪಯೋಗಕ್ಕೆ ಬರುತ್ತಾ ಇಲ್ಲ. ಕಾಟಾಚಾರಕ್ಕಾಗಿ ಇರುವ ಹಾಗಿದೆ. ಸರಿಯಾದ ದೂರವಾಣಿ ಸಂಖ್ಯೆಯನ್ನು ಈ ಕಚೇರಿಯಲ್ಲಿ ಪ್ರಕಟಿಸಿ ಜನರಿಗೆ ಉಪಯೋಗವಾಗುವಂತೆ ಕ್ರಮಕೈಗೊಳ್ಳಲು ಮನವಿಯಲ್ಲಿ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here