ಉಪ್ಪಿನಂಗಡಿ : ಗ್ಯಾರೇಜ್ ಮಾಲಕರ ಸಂಘ ರಚನೆ

0

ಅಧ್ಯಕ್ಷರಾಗಿ ಸಂಜೀವ ಗೌಡ, ಕಾರ್ಯದರ್ಶಿಯಾಗಿ ಸುರೇಶ್ ಕುಲಾಲ್

ಉಪ್ಪಿನಂಗಡಿ: ದ.ಕ. ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಉಪ್ಪಿನಂಗಡಿ ವಲಯದ ಅಧ್ಯಕ್ಷರಾಗಿ ಸಂಜೀವ ಗೌಡ, ಕಾರ್ಯದರ್ಶಿಯಾಗಿ ಸುರೇಶ್ ಕುಲಾಲ್ ಆಯ್ಕೆಯಾಗಿದ್ದಾರೆ.ಕೋಶಾಧಿಕಾರಿಯಾಗಿ ಹರೀಶ್ ಆನಾಜೆ, ಉಪಾಧ್ಯಕ್ಷರಾಗಿ ವಿನಯ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಜೀವನ್ ಆಯ್ಕೆಯಾಗಿದ್ದಾರೆ.


34 ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಮಠದ ಸಭಾಭವನದಲ್ಲಿ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಈ ಸಂದರ್ಭ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಉಪಾಧ್ಯಕ್ಷ ದಿನಕರ ಕುಲಾಲ್, ಕೋಶಾಧಿಕಾರಿ ರಾಜ್‌ಗೋಪಾಲ್ ಹಾಗೂ ಸುಂದರ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಲೋಶಿತ್ ಕುಮಾರ್, ಕಿರಣ್ ರಾಜ್, ಮುರಳಿಕೃಷ್ಣ, ಕೃಷ್ಣ ರೈ ಎನ್., ಉಪ್ಪಿನಂಗಡಿ ವಲಯದ ನಿಕಟಪೂರ್ವಾಧ್ಯಕ್ಷ ಸದಾನಂದ ನೆಕ್ಕಿಲಾಡಿ, ಸುದೀನ್ ರೈ, ವಿನಯಕುಮಾರ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here