ಕ್ಯಾಂಪ್ಕೋ ಇನ್ ಸೇವಾದಿಂದ ರಕ್ತದಾನ ಮತ್ತು ರಕ್ತದಾನ ಜಾಗೃತಿ ಕಾರ್ಯಾಗಾರ

0

ಪುತ್ತೂರು: ಕ್ಯಾಂಪ್ಕೊ ಡೇ ಪ್ರಯುಕ್ತ ಕ್ಯಾಂಪ್ಕೊ ಇನ್ ಸೇವಾ ಹಾಗೂ ಕ್ಯಾಂಪ್ಕೊ ನಿಯಮಿತ ಮಂಗಳೂರು, ಸೇವಾ ಭಾರತಿ ಮಂಗಳೂರು ಇವರ ಸಹಬಾಗಿತ್ವದಲ್ಲಿ ಕ್ಯಾಂಪ್ಕೊ ನಿಯಮಿತ ಮಂಗಳೂರು ಇದರ ಕೇಂದ್ರ ಕಛೇರಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.


ಸುಮಾರು 30 ಮಂದಿ ಕ್ಯಾಂಪ್ಕೋ ಉದ್ಯೋಗಿಗಳು ರಕ್ತದಾನ ಮಾಡಿದರು. ಕ್ಯಾಂಪ್ಕೊ ಇನ್ ಸೇವಾ ಹಾಗೂ ಸೇವಾ ಭಾರತಿ ಬಂಟ್ವಾಳ ವತಿಯಿಂದ ಕ್ಯಾಂಪ್ಕೊ ಚಾಕಲೇಟು ಕಾರ್ಖಾನೆ ಪುತ್ತೂರಿನಲ್ಲಿ ರಕ್ತದಾನ ಜಾಗೃತಿ ಕಾರ್ಯಕ್ರಮ ನೆರವೇರಿಸಲಾಯಿತು. ಕೀರ್ತನ್ ದಿಡುಪೆ (ಸೇವಾ ಭಾರತಿ ಬಂಟ್ವಾಳ) ಇವರು ರಕ್ತದಾನದ ಜಾಗೃತಿ ಕಾರ್ಯಾಗಾರವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here