ಜೇಸಿಐ ಆಲಂಕಾರು ಘಟಕಕ್ಕೆ ವಲಯಾಧ್ಯಕ್ಷರ ಅಧಿಕೃತ ಭೇಟಿ – ಶಾಶ್ವತ ಕೊಡುಗೆಗಳ ಹಸ್ತಾಂತರ

0

ಆಲಂಕಾರು: ಜೇಸಿಐ ಆಲಂಕಾರು ಘಟಕದ ವತಿಯಿಂದ ಈ ವರ್ಷದ ಶಾಶ್ವತ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ವಲಯಾಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ನಡೆಯಿತು.


ಆಲಂಕಾರು ಘಟಕಕ್ಕೆ ಆಗಮಿಸಿದ ಜೇಸಿಐ ಇಂಡಿಯಾ ವಲಯ 15ರ ವಲಯಾಧ್ಯಕ್ಷರಾದ ಗಿರೀಶ್ ಎಸ್.ಪಿ.ಅವರಿಗೆ ಆಲಂಕಾರು ಹೃದಯ ಭಾಗದಲ್ಲಿರುವ ಜೇಸಿ ಬಸ್ ತಂಗುದಾಣದಲ್ಲಿ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು. ಬಳಿಕ ಕುಂತೂರು ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮನವಳಿಕೆ-1 ಅಂಗನವಾಡಿ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಹಾಗೂ ಪೆರಾಬೆ ಗ್ರಂಥಾಲಯಕ್ಕೆ ರೀಡಿಂಗ್ ಟೇಬಲ್‌ನ್ನು ವಲಯಾಧ್ಯಕ್ಷರ ಮೂಲಕ ಹಸ್ತಾಂತರಿಸಲಾಯಿತು.


ವಲಯಾಧ್ಯಕ್ಷರ ಜೊತೆಗೆ ಅವರ ಆಪ್ತ ಕಾರ್ಯದರ್ಶಿ ಪ್ರಶಾಂತ್, ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್ ಉಪಸ್ಥಿತರಿದ್ದು ಆಲಂಕಾರು ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಅಂಗನವಾಡಿ ಕಾರ್ಯಕರ್ತೆ ಮೋಹಿನಿ, ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿ ಅವರು ಕೊಡುಗೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಆಲಂಕಾರು ಘಟಕದ ಪೂರ್ವಾಧ್ಯಕ್ಷರಾದ ಪ್ರದೀಪ್ ಬಾಕಿಲ, ಗುರುಕಿರಣ್ ಶೆಟ್ಟಿ, ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಗುರುಪ್ರಸಾದ್ ರೈ, ಸದಸ್ಯರಾದ ಪ್ರೇಮ್‌ಕುಮಾರ್, ವಸಂತಿ, ದೇವಕಿ, ಧನ್ಯಶ್ರೀ, ವಲಯ ನಿರ್ದೇಶಕಿ ಹೇಮಲತಾಪ್ರದೀಪ್, ಪೆರಾಬೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಚಂದ್ರಶೇಖರ ರೈ, ಬೇಬಿ ಸಿ ಪಾಟಾಳಿ, ಕುಸುಮಾವತಿ ಪೂಂಜ ಉಪಸ್ಥಿತರಿದ್ದರು. ಘಟಕಾಧ್ಯಕ್ಷೆ ಮಮತಾ ಅಂಬರಾಜೆ ಸ್ವಾಗತಿಸಿ, ಪ್ರದೀಪ್ ಬಾಕಿಲ ವಂದಿಸಿದರು.

LEAVE A REPLY

Please enter your comment!
Please enter your name here