ಕುಂಬ್ರದ ಹಿರಿಯ ರಿಕ್ಷಾ ಚಾಲಕ ಜಗನ್ನಾಥ ರೈ ಅಮೈ ನಿಧನ

0

ಪುತ್ತೂರು: ಕುಂಬ್ರದ ಹಿರಿಯ ರಿಕ್ಷಾ ಚಾಲಕ ಅರಿಯಡ್ಕ ಗ್ರಾಮದ ಅಮೈ ನಿವಾಸಿ ಜಗನ್ನಾಥ ರೈ (80ವ)ರವರು ಜು.20 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು 1975 ರಿಂದ ರಿಕ್ಷಾ ಚಾಲಕರಾಗಿ ಗುರುತಿಸಿಕೊಂಡಿದ್ದರು. ಕುಂಬ್ರದಲ್ಲಿ ರಿಕ್ಷಾ ಬಾಡಿಗೆ ಮಾಡುತ್ತಿದ್ದ ಇವರು ಹಿರಿಯ ರಿಕ್ಷಾ ಚಾಲಕರಾಗಿ ತೀರಿ ಹೋಗುವ ಹಿಂದಿನ ದಿನದ ತನಕವೂ ರಿಕ್ಷಾ ಓಡಿಸುತ್ತಿದ್ದರು.
ಮೃತರು ಪತ್ನಿ ನೇತ್ರಾವತಿ, ಪುತ್ರರಾದ ಹರೀಶ್ ಮತ್ತು ಅಶೋಕ್, ಪುತ್ರಿ ಶೋಭಾ, ಸಹೋದರ ರಾಧಾಕೃಷ್ಣ ರೈ, ಸಹೋದರಿ ಸರಸ್ವತಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here