ದರ್ಬೆ ಸರ್ಕಲ್ ಗೆ ಅಂಬೇಡ್ಕರ್ ವೃತ್ತವೆಂದು ನಾಮಕರಣ ಮಾಡದಿದ್ದರೆ ಅರೆ ಬೆತ್ತಲೆ ಪ್ರತಿಭಟನೆ-ಎಸ್ಸಿ /ಎಸ್ಟಿ ಹಿತರಕ್ಷಣೆ ಭದ್ರತೆ ಕುರಿತ ಸಭೆಯಲ್ಲಿ ಸದಸ್ಯರ ಎಚ್ಚರಿಕೆ

0

ಪುತ್ತೂರು: ದರ್ಬೆ ಸರ್ಕಲ್ ಗೆ ಅಂಬೇಡ್ಕರ್ ವೃತ್ತ ನಾಮಕರಣ ಮಾಡದಿದ್ದರೆ ಅರೆ ಬೆತ್ತಲೆ ಪ್ರತಿಭಟನೆ ಮಾಡುವ ಕುರಿತು ಎಸ್ಸಿ /ಎಸ್ಟಿ ಹಿತರಕ್ಷಣೆ ಭದ್ರತೆ ಸಭೆಯಲ್ಲಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.


ಜು.22 ರಂದು ತಾ.ಪಂ ಸಭಾಂಗಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣೆ ಮತ್ತು ಭದ್ರತೆ ಕುರಿತ ಸಭೆಯಲ್ಲಿ ಸದಸ್ಯರು ದರ್ಬೆ ವೃತ್ತಕ್ಕೆ ಡಾ. ಬಿ ಆರ್ ಅಂಬೇಡ್ಕರ್ ನಾಮಕರಣ ಮಾಡುವಂತೆ ಆಗ್ರಹಿದರು. 2012 ರಲ್ಲಿ ನಾಮಕರಣಕ್ಕೆ ಮನವಿ ಮಾಡಲಾಗಿತ್ತು. ಆದರೆ ಈ ತನಕ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.ಹಾಗಾಗಿ ಮುಂದಿನ ಸಭೆಯಲ್ಲಿ ನಾವು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತೇವೆ ಎಂದವರು ಹೇಳಿದರು.

LEAVE A REPLY

Please enter your comment!
Please enter your name here