ಮಾಣಿಲ ಕಾಮಜಲು ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಅಧ್ಯಕ್ಷರಾಗಿ ದೇವಿಪ್ರಸಾದ್ ಕುಕ್ಕಾಜೆ – ಪ್ರಧಾನ ಕಾರ್ಯದರ್ಶಿ ಸುಶ್ಮಿತಾ ಕೆ, – ಕೋಶಾಧಿಕಾರಿ ದೀಕ್ಷಿತ್ ತಾರಿದಳ

ವಿಟ್ಲ: ಮಾಣಿಲ ಗ್ರಾಮದ ಕಾಮಜಲು ಹಿ.ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಶ್ರೀ ಕೃಷ್ಣ ಗುರೂಜಿಯವರ ಪುತ್ರ ದೇವಿಪ್ರಸಾದ್ ಕುಕ್ಕಾಜೆ , ಉಪಾಧ್ಯಕ್ಷರಾಗಿ ವಿಕ್ರಮ್ ಮುರುವ, ಪ್ರಧಾನ ಕಾರ್ಯದರ್ಶಿಯಾಗಿ ಸುಶ್ಮಿತಾ ಕೆ, ಜೊತೆ ಕಾರ್ಯದರ್ಶಿಯಾಗಿ ಶ್ರುತಿ ಕೆ, ಕೋಶಾಧಿಕಾರಿಯಾಗಿ ದೀಕ್ಷಿತ್ ತಾರಿದಳರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಸುಂದರ ಕುಲಾಲ್ ಪಿ, ರಘುನಾಥ ನಾಯಕ್ ಕಕ್ವೆ , ಪೋಷಕರಾದ ಚಿತ್ರಲತಾ ಹಾಗೂ ಪುಷ್ಪಲತಾ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here