ಕೌಕ್ರಾಡಿ: ಮಳೆಗೆ ಮನೆಗೆ ಭಾಗಶಃ ಹಾನಿ

0

ನೆಲ್ಯಾಡಿ: ಭಾರೀ ಮಳೆಯಿಂದಾಗಿ ಮಣ್ಣು ಕುಸಿತಗೊಂಡು ಮನೆಗೆ ಭಾಗಶ: ಹಾನಿಯಾಗಿರುವ ಘಟನೆ ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಎಂಬಲ್ಲಿ ನಡೆದಿದೆ.
ಶಾಂತಿಬೆಟ್ಟು ನಿವಾಸಿ ಬಿಪಾತುಮ ಯಾನೆ ಸಕೀನಾ ಎಂಬವರ ಮನೆ ಭಾಗಶ: ಹಾನಿಯಾಗಿದೆ. ಜು.30ರಂದು ಸುರಿದ ಭಾರೀ ಮಳೆಯಿಂದಾಗಿ ಮನೆ ಅಡಿಭಾಗದ ಮಣ್ಣು ಕುಸಿತಗೊಂಡಿದೆ. ಮಣ್ಣು ಕುಸಿತಗೊಳ್ಳುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಸಕೀನಾ ಹಾಗೂ ಅವರ ಮನೆಯವರು ರಾತ್ರಿ ಈ ಮನೆಯಲ್ಲಿ ವಾಸ್ತವ್ಯವಿರಲಿಲ್ಲ. ಘಟನೆಯಿಂದಾಗಿ ಇವರಿಗೆ ಸಾವಿರಾರು ರೂ.ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here