ನೆಲ್ಯಾಡಿ: ಬಾಲಯೇಸು ದೇವಾಲಯದಲ್ಲಿ ರಾಷ್ಟ್ರೀಯ ಯುವದಿನ ಆಚರಣೆ

0

ನೆಲ್ಯಾಡಿ: ಇಲ್ಲಿನ ಬಾಲಯೇಸು ದೇವಾಲಯದಲ್ಲಿ ರಾಷ್ಟ್ರೀಯ ಯುವದಿನ ಆಚರಣೆ ಆ.11ರಂದು ನಡೆಯಿತು.


ದಿವ್ಯ ಬಲಿಪೂಜೆಯಲ್ಲಿ ಯುವ ಜನರಿಗೋಸ್ಕರ ವಿಶೇಷವಾಗಿ ಪ್ರಾರ್ಥಿಸಲಾಯಿತು. ವಂ.ಧರ್ಮಗುರು ಫಾ.ಗ್ರೇಶನ್ ಅಲ್ವಾರಿಸ್ ಅವರು ಮಾತನಾಡಿ, ಈ ದಿನದ ಮಹತ್ವವನ್ನು ತಿಳಿಸಿ ಯುವ ಸಮುದಾಯವು ಸಂಘಟಿತವಾಗಿದ್ದರೆ ಧರ್ಮಕೇಂದ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದೆಂದು ಹೇಳಿದರು.

ಮುಂದಿನ ದಿನಗಳಲ್ಲಿ ಮಾಡುವ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿ ಕಾರ್ಯಚಟುವಟಿಕೆಯ ಪಟ್ಟಿಯನ್ನು ತಯಾರಿಸಿದರು. ಐಸಿವೈಎಂ ಸಚೇತಕಿ ಸಿಸ್ಟರ್ ಸರಿತಾ ಡಿಸೋಜ, ವೈ.ಸಿ.ಎಸ್ ಸಚೇತಕಿ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ನಿಶ್ಮಿತಾ ಡಿಸೋಜ ಹಾಗೂ ಯುವ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here