ಪುತ್ತೂರು: ಚುನಾವಣೆಗೆ ಸಂಬಂಧಿಸಿ ಪ್ರಭಾರಿಗಳಿಂದ ಅಭಿಪ್ರಾಯ ಸಂಗ್ರಹ ಆಗಲಿದೆ – ಸಂಸದ ಬ್ರಿಜೇಶ್ ಚೌಟ

0

ಪುತ್ತೂರು: ಪುತ್ತೂರು ನಗರಸಭೆ ಮತ್ತು ವಿಟ್ಲ ಪಟ್ಟಣ ಪಂಚಾಯತ್‌ ಚುನಾವಣೆಗೆ ಸಂಬಂಧಿಸಿ ಆಯ್ಕೆ ಪ್ರಕ್ರಿಯೆಗೆ ಪ್ರಭಾರಿಗಳಿಂದ ಅಭಿಪ್ರಾಯ ಸಂಗ್ರಹ ಆಗಲಿದೆ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಹೇಳಿದರು.


ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಪಕ್ಷದ ಆಂತರಿಕಾ ಸಭೆ ನಡೆಸಿ ಬಳಿಕ ಕಚೇರಿಯ ಹೊರಗೆ ಮಾಧ್ಯಮದೊಂದಿಗೆ ಮಾತನಾಡಿದರು. ನಾನು ಸುಳ್ಯಕ್ಕೆ ಹೋಗುವಾಗ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಇದ್ದಾರೆಂದು ಗೊತ್ತಾಯಿತು. ಹಾಗಾಗಿ ಬಂದೆ. ಬೇರೆವಾ ಉದ್ದೇಶದಿಂದ ಬಂದಿರುವುದು ಅಲ್ಲ. ಚುನಾವಣೆ ಕುರಿತು ಈಗಾಗಲೇ ಪುತ್ತೂರಿಗೆ ಮತ್ತು ವಿಟ್ಲಕ್ಕೆ ಪ್ರಭಾರಿಯನ್ನು ಜಿಲ್ಲಾಧ್ಯಕ್ಷರು ಘೋಷಣೆ ಮಾಡಿದ್ದಾರೆ.
ಅವರು ಬಂದು ಪ್ರಜಾಪ್ರಭುತ್ವ ರೀತಿಯಲ್ಲಿ ಎಲ್ಲರ ಅಭಿಪ್ರಾಯ, ಹಿರಿಯರ ಅಭಿಪ್ರಾಯ ಪಡೆದು ಆಯ್ಕೆ ನಡೆಯುತ್ತದೆ. ಇದರ ಜೊತೆಗೆ ಪಕ್ಷದ ಸದಸ್ಯತ್ವ ಅಭಿಯಾನ ಪ್ರಾರಂಭ ಆಗಿದೆ. ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here