ಮಾಡಾವು: ಕೂರತ್ ತಂಙಳ್ ಅನುಸ್ಮರಣೆ, ಸರ್ಕಲ್ ಸಮಾವೇಶ

0

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಮಾಡಾವು ಸರ್ಕಲ್ ವತಿಯಿಂದ ಸರ್ಕಲ್ ಸಮಾವೇಶ ಹಾಗೂ ಕೆಎಂಜೆ, ಎಸ್ ವೈಎಸ್, ಎಸ್ಸೆಸ್ಸೆಫ್ ವತಿಯಿಂದ ಕುರ್ರತುಸ್ಸಾದಾತ್ ಸಯ್ಯಿದುನಾ ಕೂರತ್ ತಂಙಳ್ ರವರ ಅನುಸ್ಮರಣೆಯು ಮಾಡಾವು ಸರ್ಕಲ್ ಕೆಎಂಜೆ ಅಧ್ಯಕ್ಷ ಎಮ್ ಎಮ್ ಅಬೂಬಕರ್ ರವರ ಅಧ್ಯಕ್ಷತೆಯಲ್ಲಿ ಮಾಡಾವು ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಎಸ್ ವೈಎಸ್ ಮಾಡಾವು ಸರ್ಕಲ್ ಅಧ್ಯಕ್ಷ ಮುನೀರ್ ಹನೀಫಿ ಅರಿಕ್ಕಿಲರವರು ಉದ್ಘಾಟಿಸಿ ಅನುಸ್ಮರಣಾ ಭಾಷಣ ಮಾಡಿದರು. ನಾಯಕತ್ವವನ್ನು ಅನುಭವಿಸಿರಿ , ಸಂಘಟನೆಯನ್ನು ಬಲಪಡಿಸಿರಿ ಎಂಬ ವಿಷಯದಲ್ಲಿ ಸಂಘಟಕ ವಾಗ್ಮಿ ಅಬ್ಬಾಸ್ ಮದನಿ ಬಂಡಾಡಿರವರು ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ನಾಯಕರಾದ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಮುಹಮ್ಮದ್ ಬಾಯಂಬಾಡಿ, ಹಮೀದ್ ಮದನಿ ಮಾಡಾವು, ಫ್ಯಾಮಿಲಿ ಇಬ್ರಾಹಿಂ ಹಾಜಿ, ನಝೀರ್ ಹಾಜಿ ಕೆಸಿಎಫ್, ಎಸ್ ವೈಎಸ್ ಝೋನ್ ಸಾಂತ್ವನ ಕಾರ್ಯದರ್ಶಿ ಫವಾಝ್ ಕಟ್ಟತ್ತಾರು, ಎಸ್ಸೆಸ್ಸೆಫ್ ಡಿವಿಶನ್ ನಾಯಕ ಮುಹ್ಸಿನ್ ಕಟ್ಟತ್ತಾರು, ಮೂಸ ಅಂಚಿನಡ್ಕ, ಉಮರ್ ಹಾಜಿ ಕಟ್ಟತ್ತಾರು, ಅಬ್ದುಲ್ ಖಾದರ್ ಹಾಜಿ ಚೆನ್ನಾರ್ , ಎಮ್ ಎಮ್ ಹುಸೈನ್ ಮುಸ್ಲಿಯಾರ್, ಅಬ್ದುಲ್ ರಝಾಕ್ ಎಂ ಎಂ , ಅಬ್ದುಲ್ ರಝಾಕ್ ಕೈಕಂಬ, ನಸೀರ್ ನಿಝಾಮಿ, ಹಮೀದ್ ಹಿಶಾಮಿ , ಶರೀಫ್ ಬಾಯಂಬಾಡಿ, ಎಸ್ಸೆಸ್ಸೆಫ್ ಸೆಕ್ಟರ್ ನಾಯಕರಾದ ಸುಹೈಲ್, ಇಸಾಕ್ ಮಾಡಾವು ಮೊದಲಾದವರು ಉಪಸ್ಥಿತರಿದ್ದರು.
ಕೆಎಂಜೆ ಕಾರ್ಯದರ್ಶಿ ಹಂಝತುಲ್ಲತೀಫಿ ಬಾಯಂಬಾಡಿ ರವರು ಸ್ವಾಗತಿಸಿ ಎಸ್ ವೈಎಸ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಚೆನ್ನಾರ್ ವಂದಿಸಿದರು.

LEAVE A REPLY

Please enter your comment!
Please enter your name here