ಸವಣೂರು :ಮನೆಮಂದಿ ಟ್ರಿಪ್ ಹೋದ ಸಂದರ್ಭದಲ್ಲಿ ಮನೆಯಿಂದ ಕಳ್ಳತನ

0

ಸವಣೂರು : ಮನೆಗೆ ಬೀಗ ಹಾಕಿ ಮನೆ ಮಂದಿಯೆಲ್ಲ  ಟ್ರಿಪ್ ಹೋದ ಸಂದರ್ಭದಲ್ಲಿ ಕಳ್ಳರು ಮನೆಗೆ ನುಗ್ಗಿ  ನಗ ನಗದು ಕಳವು ಮಾಡಿರುವ ಘಟನೆ ಸವಣೂರಿನಲ್ಲಿ ನಡೆದಿದೆ. 

ಕಡಬ ತಾಲೂಕಿನ ಸವಣೂರು ನಿವಾಸಿ  ಸಲೀಂ ಹಾಗೂ ಅವರ ಮನೆಯವರು ಟ್ರಿಪ್‌ಗೆ ಹೋಗಿ ವಾಪಾಸ್ಸಾಗುವ ವೇಳೆಗೆ ಪ್ರಕರಣ ಬೆಳಕಿಗೆ ಬಂದಿದೆ. 

ಸಲೀಂ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಕಳೆದ ಶುಕ್ರವಾರ ಮನಗೆ ಭದ್ರವಾಗಿ ಬೀಗ ಹಾಕಿ  ಮಕ್ಕಳೊಂದಿಗೆ ಟೂರ್ ಹೋಗಿದ್ದರು. ಟ್ರಿಪ್ ಮುಗಿಸಿಕೊಂಡು  ಭಾನುವಾರ ಮಧ್ಯರಾತ್ರಿ ವೇಳೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಮನೆಯ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿರುವುದು ಅರಿವಿಗೆ ಬಂದಿದೆ.  ಗಾಬರಿಯಿಂದ ಮನೆಯ ಯಜಮಾನ ಮನೆಯೊಳಗೆ ಪ್ರವೇಶಿದಾಗ ಅಲ್ಲಿದ್ದ ಕಪಾಟು ಬಾಗಿಲು ಒಡೆದು  ಅದರಲ್ಲಿದ್ದ ಚಿನ್ನ ಹಾಗೂ ನಗದು ದೋಚಿರುವುದು ಕಂಡು ಬಂದಿದೆ. 

ಕಪಾಟಿನಲ್ಲಿದ್ದ ಅಂದಾಜು ರೂ 2,12,00 ಮೌಲ್ಯದ   53 ಗ್ರಾಂ ಚಿನ್ನದ ಆಭರಣಗಳು,  ರೂ 4,೦೦೦ ಮೌಲ್ಯ ಒಂದು ಸಾಕ್ಸಿಂಗ್ ಕಂಪೆನಿಯ ಟ್ಯಾಬ್, ರೂ 15,000 ಮೌಲ್ಯದ ಒಂದು ಟಿಸೋಟ್ ವಾಚ್ ಹಾಗೂ  30,000 ರೂ ನಗದು ಕಳವಾಗಿದೆ ಎಂದು ಸಲೀಂ ಅವರು ಬೆಳ್ಳಾರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

LEAVE A REPLY

Please enter your comment!
Please enter your name here