ಪುತ್ತೂರು: ವಿ ಗಾರ್ಡ್ ಕಂಪೆನಿ ಉತ್ಪನ್ನಗಳ ಪುತ್ತೂರು,ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ ವಿತರಕರ ಸಭೆಯು ಫೆ.5 ರಂದು ಪುತ್ತೂರಿನ ಪ್ರಶಾಂತ್ ಮಹಲ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿ ಗಾರ್ಡನ ಹೊಸ ಫ್ಯಾನ್ ಮಾದರಿಯನ್ನು ಕಂಪೆನಿಯ ಉಪಾಧ್ಯಕ್ಷರಾದ ಸೂರ್ಯಪ್ರಸಾದ್, ಬ್ರಾಂಚ್ ಮ್ಯಾನೇಜರ್ ಹರ್ಷೇಂದ್ರ ಪ್ರಸಾದ್, ಡಿಸ್ರ್ಟಿಬ್ಯೂಟರ್ ಜೋನ್ ಪೆರೇರ ಹಾಗೂ ಸವ್ರೀಸ್ ಮ್ಯಾನೇಜರ್ ಕೃಷ್ಣ ಕುಮಾರ್ರವರು ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಮೂರು ತಾಲೂಕಿನ ಒಟ್ಟು ಎಪ್ಪತ್ತು ವಿತರಕರು, ವಿ ಗಾರ್ಡ್ ಕಂಪೆನಿ ಸಿಬ್ಬಂದಿ ವರ್ಗ ಮತ್ತು ಡಿಸ್ರ್ಟಿಬ್ಯೂಟರ್ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸೇಲ್ಸ್ ಇನ್ಚಾರ್ಜ್ ಸುರೇಶ್ ಕುಮಾರ್ ಸ್ವಾಗತಿಸಿ, ಹರ್ಷೇಂದ್ರ ವಂದಿಸಿದರು.