ವಿಟ್ಲ :ಸಂಪೂರ್ಣ ಸುರಕ್ಷಾ ಮಾಹಿತಿ ಕಾರ್ಯಾಗಾರ 

0

ಪುತ್ತೂರು :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲ ತಾಲ್ಲೂಕು ವಿಟ್ಲ ಯೋಜನಾ ಕಛೇರಿ ವ್ಯಾಪ್ತಿಯ ಸೇವಾಪ್ರತಿನಿಧಿಗಳಿಗೆ 2025-2026 ನೇ ಸಾಲಿನ ಸಂಪೂರ್ಣ ಸುರಕ್ಷಾ ಹಾಗೂ ಹಿಡುವಳಿ ಯೋಜನೆ  ಬಗ್ಗೆ  ಮಾಹಿತಿ ಕಾರ್ಯಕ್ರಮ ಹಮ್ಮಿಕೊಡಿದ್ದು  ಸಭೆಯನ್ನು ತಾಲೂಕಿನ ಯೋಜನಾಧಿಕಾರಿ ರಮೇಶ್ ರವರು ಉದ್ಘಾಟನೆ ಮಾಡಿ ಪ್ರಾಸ್ತವಿಕ  ಮಾತುಗಳನ್ನಾಡಿದರು. 

ಜಿಲ್ಲಾ  ವಿಮಾ ಸಮನ್ವಯಧಿಕಾರಿ ಜನಾರ್ಧನರವರು ಸುರಕ್ಷಾದಲ್ಲಿ ಸಿಗುವ ಸಾಲಭ್ಯ, ಪ್ಯಾಕೇಜ್,  ಬೇಕಾದ ದಾಖಲಾತಿ ಬಗ್ಗೆ ಸಂಘದ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಿ ಸುರಕ್ಷಾ ನೋಂದಾವಣೆ ಮಾಡುವ ಬಗ್ಗೆ ಸೇವಾಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. 

ತಾಲ್ಲೂಕು ಕೃಷಿ ಅಧಿಕಾರಿ ಚಿದಾನಂದರವರು ಹಿಡುವಳಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು, ಕಛೇರಿ ಸಹಾಯಕ ಪ್ರಬಂಧಕರು, ಕಛೇರಿ ಸಿಬ್ಬಂದಿ, ತಾಲೂಕಿನ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here