ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಅಷ್ಟಮಿ ಮಖೆ ಕೂಟದ ಪ್ರಯುಕ್ತ ಬಂದ ಭಕ್ತಾದಿಗಳಿಗೆ ಚಾರ್ಧಾಮ್ ಯಾತ್ರಾ ಸಂಘದ ವತಿಯಿಂದ ಮಜ್ಜಿಗೆ ವಿತರಣೆ ನಡೆಸಲಾಯಿತು.
ಈ ಸಂದರ್ಭ ಚಾರ್ಧಾಮ್ ಯಾತ್ರಾ ಸಂಘದ ಕೃಷ್ಣ ಶೆಣೈ, ದೇವಾಲಯದ ಮುಖ್ಯ ವ್ಯವಸ್ಥಾಪಕರಾದ ವೆಂಕಟೇಶ ಎಂ. ರಾವ್, ಸಿಬ್ಬಂದಿಗಳಾದ ಕೃಷ್ಣಪ್ರಸಾದ್ ಭಟ್, ಗಿರೀಶ್ ಉಪಸ್ಥಿತರಿದ್ದರು.