ಪುತ್ತೂರು: ಭಾರಿ ಮಳೆಗೆ ನೆಹರುನಗರದ ಅಜೇಯನಗರದಲ್ಲಿ ಡಾಮರು ರಸ್ತೆಯೊಂದು ಮಣ್ಣು ಸಡಿಲಗೊಂಡು ಬಿರುಕು ಬಿಟ್ಟಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಪಾಯ ಎದುರಾಗಿದೆ.
ಅಜೇಯನಗರದಲ್ಲಿ ಹೊಸದಾಗಿ ಡಾಮರೀಕರಣ ನಡೆದಿತ್ತು, ಜೊತೆಗೆ ಪಕ್ಕದಲ್ಲಿ ಧರೆಗೆ ತಡೆಗೋಡೆಯನ್ನೂ ನಿರ್ಮಿಸಲಾಗಿತ್ತು. ಆದರೆ ಮಳೆಯ ಆವಾಂತರದಿಂದ ಮಣ್ಣು ಸಡಿಲಗೊಂಡು ಡಾಮರು ರಸ್ತೆ ಬಿರುಕು ಬಿಟ್ಟಿದೆ.
ಸ್ಥಳಕ್ಕೆ ನಗರಸಭೆ ಸದಸ್ಯ ಕೆ.ಜೀವಂಧರ್ ಜೈನ್ ಮತ್ತು ನಗರಸಭೆಯಿಂದ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ. ಮಣ್ಣು ಸಡಿಲಗೊಂಡ ಹಿನ್ನೆಲೆಯಲ್ಲಿ ರಸ್ತೆ ಬಿರುಕುಬಿಟ್ಟಿದ್ದು, ಮಳೆ ಕಡಿಮೆ ಆದ ತಕ್ಷಣ ದುರಸ್ಥಿಗೊಳಿಸಲಾಗುವುದು ಎಂದು ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.