![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಬನ್ನೂರು ನಿವಾಸಿ ಮೆಕ್ಯಾನಿಕ್ ಆಗಿದ್ದ ಮಹೇಶ್(29ವ) ಅವರು ಮೇ 31ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತನ್ನ ಪೋಷಕರು ಮೃತಪಟ್ಟ ಬಳಿಕ ಮಹೇಶ್ ಅವರು ಆನೆಮಜಲು ತನ್ನ ಸಂಬಂಧಿಕರ ಮನೆಯಲ್ಲಿ ಮತ್ತು ಕೆಲ ಸಮಯ ಬನ್ನೂರು ನೆಕ್ಕಿಲದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಬಳಿಕ ಮೆಕ್ಯಾನಿಕ್ ಆಗಿ ಕೆಲವು ಕಡೆ ಕೆಲಸ ನಿರ್ವಹಿಸಿದ್ದ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಮೃತಪಟ್ಟಿದ್ದಾರೆ.