![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ರಾಮಕುಂಜ: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ದೈವನರ್ತಕ ಕುಟ್ಟಿಪರವನ್(ಅಣ್ಣು ಪರವನ್)ರವರಿಗೆ ಶ್ರದ್ಧಾಂಜಲಿ ಸಭೆ ಹಳೆನೇರೆಂಕಿ ಸಮೀಪದ ಮೇಲೂರು-ದರ್ಖಾಸು ಮೃತರ ಮನೆಯಲ್ಲಿ ನಡೆಯಿತು.
ವೀರೇಂದ್ರ ಗೌಡ ಪಾಲೆತ್ತಡ್ಡ, ಶೇಖರ ಗೌಡ ಕಟ್ಟಪುಣಿ, ಕಿರಣ್ ಪಾದೆ ಅವರು ಮೃತ ಕುಟ್ಟಿಪರವನ್ರವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು.
ಹಳೆನೇರೆಂಕಿ ಸರಕಾರಿ ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ಸಾಂತಪ್ಪ ವೈ., ಪಟ್ಟೆಗುತ್ತು ವೀರೇಂದ್ರ ಜೈನ್, ಒಡ್ಯಮೆಗುತ್ತು ನಾರಾಯಣ ರೈ, ಸತೀಶ್ ರೈ ಕೊಣಾಲುಗುತ್ತು, ಚಂದಪ್ಪ ಗೌಡ ಕಾಯರ್ತಡ್ಕ, ನೋಣಯ್ಯ ಶೆಟ್ಟಿ ಮರಂದೆ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ಬಜತ್ತೂರು ಗ್ರಾ.ಪಂ.ಸದಸ್ಯ ಗಂಗಾಧರ ಕೆ.ಎಸ್., ಮಾಜಿ ಸದಸ್ಯ ಆನಂದ ಕೆ.ಎಸ್., ಧರ್ಣಪ್ಪ ಗೌಡ ಅಲೆಪ್ಪಾಡಿ, ರುಕ್ಮಿಣಿ ಶಿವತ್ತಮಠ, ಕೈಪಂಗಳ ಬಾರಿಕೆ ಬ್ರಹ್ಮಬೈದರ್ಕಳ ಗರಡಿಯ ಮೋನಪ್ಪ, ಶುಭಕರ, ಪುಣಚ ಬ್ರಹ್ಮಬೈದರ್ಕಳ ಗರಡಿಯ ಕುಟ್ಟಿಪೂಜಾರಿ, ಸೀತಾರಾಮ, ನಾರಾಯಣ, ಜನಾರ್ದನ ಪೂಜಾರಿ ಕದ್ರ, ಭಾಸ್ಕರ ಗೌಡ ಹಿರಿಂಜ, ನಿವೃತ್ತ ಪೊಲೀಸ್ ಅಧಿಕಾರಿ ಪದ್ಮಯ ಗೌಡ ಡೆಂಬಲೆ, ಕೆಎಸ್ಆರ್ಟಿಸಿ ನಿವೃತ್ತ ಸಂಚಾರ ನಿಯಂತ್ರಣ ಅಧಿಕಾರಿ ದೇವಪ್ಪ ಗೌಡ ಬರೆಂಬೆಟ್ಟು, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ ಆರ್.ಕೆ., ವಿಶ್ವನಾಥ ಗೌಡ ಪೆರಣಗುತ್ತು, ಮುರಿಯೇಲ್ಗುತ್ತು ಸದಾಶಿವ ಪೂಜಾರಿ, ಡೆಬ್ಬೇಲಿಗುತ್ತು ಪ್ರಶಾಂತ್ ರೈ, ನಾರಾಯಣ ಪೂಜಾರಿ ಕೊಂಕ, ಕೆಲಂಬೀರಿ ಬ್ರಹ್ಮಬೈದರ್ಕಳ ಗರಡಿಯ ಮುಖ್ಯಸ್ಥರು, ಓಣಿತ್ತಾರು ದೈವಸ್ಥಾನದ ಮುಖ್ಯಸ್ಥರು, ಬೀರಮಂಗಲ ಹೊಸಮನೆಯ ಕುಟುಂಬಸ್ಥರು, ಪಿಲಿಗುಂಡ ಕುಟುಂಬಸ್ಥರು ಸೇರಿದಂತೆ ಹಲವು ಮಂದಿ ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಮೃತರ ಪತ್ನಿ ತುಂಗಮ್ಮ, ಪುತ್ರರಾದ ಓಬಯ್ಯ ಪರವ, ವೆಂಕಪ್ಪ ಪರವ, ಗಣೇಶ ಪರವ, ಯಾದವ ಪರವ, ಸೊಸೆಯಂದಿರಾದ ಲೀಲಾವತಿ, ರಂಜಿನಿ, ಉಷಾ, ಪುತ್ರಿ ವಸಂತಿ, ಅಳಿಯ ಕಾಣಿಯೂರು ಗ್ರಾ.ಪಂ.ಸದಸ್ಯ ಲೋಕಯ್ಯ ಪರವ, ಕುಟುಂಬಸ್ಥರಾದ ಕಾಂತಪ್ಪ ಪರವ ಮಾದೇರಿ, ಸುಂದರಿ ಮಾದೇರಿ, ವಿಶ್ವನಾಥ ಪರವ, ಮಮತಾ, ಡೀಕಯ್ಯ ಪರವ, ವಿಮಲ, ಉಗ್ಗಪ್ಪ ಪರವ, ಲೀಲಾವತಿ ಮತ್ತಿತರರು ಸಹಕರಿಸಿದರು.