![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬೆಳಾಲು: ಬೆಳಾಲು ಗ್ರಾಮದ ಮಾಯಾ ಮುಂಡ್ರೋಟ್ಟು ಮನೆಯ ದೇವಪ್ಪ ಪೂಜಾರಿ ಎಂಬ ಸುಮಾರು 85 ವರ್ಷ ಪ್ರಾಯದ ವ್ಯಕ್ತಿಯ ಸೆ.10 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದವರು ಕಾಣೆಯಾಗಿರುತ್ತಾರೆ.
ಸ್ವಲ್ಪ ಅರೆ ಮರೆವಿನ ಇವರು ದೈಹಿಕವಾಗಿಯೂ ದುರ್ಬಲರಾಗಿರುತ್ತಾರೆ. ಈ ಮೊದಲು ಒಮ್ಮೆ ಇದೇ ರೀತಿ ಮನೆಯಿಂದ ನಾಪತ್ತೆಯಾಗಿ ಬಳಿಕ ಸಿಕ್ಕಿದ್ದಾರೆ.
ಈ ವಿಚಾರ ತಿಳಿದ ಕೂಡಲೇ ಬೆಳಾಲು ಶೌರ್ಯ ವಿಪತ್ತು ಘಟಕದ ಸಂಯೋಜಕಿ ಆಶಾರವರ ಮಾರ್ಗದರ್ಶನದಲ್ಲಿ ಘಟಕದ ಸದಸ್ಯರಾದ ಮುಳುಗುತಜ್ಞ ಹರೀಶ ಕೂಡಿಗೆ, ಸಂಜೀವ ಸುರುಳಿ, ಯಶೋಧರ ಮಂಡಾಲು, ಸುರೇಂದ್ರ ಉಜಿರೆ ಹಾಗೂ ಸುಲೈಮಾನ್ ಭೀಮಂಡೆ ಇವರುಗಳು ಮನೆ ಸಮೀಪದಲ್ಲಿ ಹಾದು ಹೋಗಿರುವ ಹೊಳೆಯಲ್ಲಿ ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಆದರೂ ಈವರೆಗೆ ಪತ್ತೆಯಾಗಿಲ್ಲ.