ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ : ನಿವ್ವಳ ರೂ.88.89 ಲಕ್ಷ ಲಾಭ

0

ಬೆಳಾಲು : ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾ ಸಭೆಯು ಸೆ.18 ರಂದು ಬೆಳಾಲು ಶ್ರೀ ಧ. ಮ.ಪ್ರೌಢ ಶಾಲೆಯಲ್ಲಿ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡರ ಅಧ್ಯಕ್ಷತೆಯಲ್ಲಿ ಜರಗಿತು. ಆರ್ಥಿಕ ವರ್ಷದಲ್ಲಿ ಸಂಘ ರೂ. 88,89,535/ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದರು ಸಂಘದ ಉಪಾಧ್ಯಕ್ಷ ಸುರೇಂದ್ರ ಗೌಡ ಎಸ್. ನಿಕಟಪೂರ್ವ ಉಪಾಧ್ಯಕ್ಷ ದಿನೇಶ ಎ. ನಿರ್ದೇಶಕರುಗಳಾದ ವಿಜಯ ಗೌಡ, ದಾಮೋದರ ಗೌಡ, ರಾಜಪ್ಪ ಗೌಡ, ಸುಲೈಮಾನ್,ರಮೇಶ ಗೌಡ, ಎಲ್ಯಣ್ಣ ನಾಯ್ಕ ಮಾಣಿಗ, ಸೀತಮ್ಮ, ಸುಜಾತಾ ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ ವರದಿ ವಾಚಿಸಿ ಸಭೆಯನ್ನು ಮುನ್ನಡೆಸಿದರು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here