ಉಜಿರೆ: ಉಜಿರೆ ಅತ್ತಾಜೆ ನಿವಾಸಿ ಗೋಪಾಲನಾಯ್ಕ್ (60) ಎಂಬವರು ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಅ.13 ರಂದು ನಡೆದಿದ್ದು ಅ.14ರಂದು ಬೆಳಿಗ್ಗೆ ಶವ ಪತ್ತೆಯಾಗಿದೆ.
ಮೃತರಾದ ಗೋಪಾಲನಾಯ್ಕ್ ಅ.13ರಂದು ಸಂಜೆ ನಾಪತ್ತೆಯಾಗಿದ್ದರು. ಎಷ್ಟೇ ಹುಡುಕಾಡಿದರು ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಉಜಿರೆಯ ಅತ್ತಾಜೆ ಸಮೀಪದ ಕೆರೆಯಲ್ಲಿ ಶವ ಪತ್ತೆಯಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.