ತಣ್ಣೀರುಪಂತ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಣ್ಣೀರುಪಂತ ವಲಯದ ಬಾರ್ಯ ಸೇವಾಕೇಂದ್ರದಲ್ಲಿ ಡಿಜಿಟಲ್ ಸಾಮಾನ್ಯ ಸೇವಾ ಕೇಂದ್ರದ ಉದ್ಘಾಟನೆ ಯನ್ನು ಪ್ರಗತಿಪರ ಕೃಷಿಕರಾದ ಕೂಸಪ್ಪ ಪೂಜಾರಿ ಮೂಡಬೈಲು ನೆರವೇರಿಸಿದರು.
ಈ ಸಂದರ್ಭದಲ್ಲಿ ಗುರುವಾಯನಕೆರೆ ಯೋಜನಾ ಕಛೇರಿಯ ತಾಲೂಕು ಯೋಜನಾಧಿಕಾರಿ ಯಶವಂತ್, ಒಕ್ಕೂಟದ ಅಧ್ಯಕ್ಷ ಬೆಳಿಯಪ್ಪ ಗೌಡ, ರಮೇಶ್ ಅನಲ್ಕೆ, ಬಾರ್ಯ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ, ಎಪಿಎಂಸಿ ಸದಸ್ಯರಾದ ಜಯಾನಂದ ಕಲ್ಲಾಪು, ತಾಲೂಕು ಜನಜಾಗೃತಿ ಕಾರ್ಯಕಾರಿ ಸದಸ್ಯರಾದ ಗುಣಕರ ಅಗ್ನಾಡಿ, ಜನಜಾಗೃತಿ ವಲಯಾಧ್ಯಕ್ಷರಾದ ಮೋನಪ್ಪ ಗೌಡ ಪುತ್ತಿಲ, ಗ್ರಾಮ ಸಮಿತಿ ಅಧ್ಯಕ್ಷರಾದ ಮೋಹನ ಗೌಡ ಅಜಿರ, ಪಂಚಾಯತ್ ಸದಸ್ಯರಾದ ಧರ್ಣಪ್ಪ ಗೌಡ, ಬಾಲಕೃಷ್ಣ ಶೆಟ್ಟಿ, ಪವಿತ್ರ, ಜಯಶ್ರೀ, ತಾಲೂಕು ಸಿಎಸ್ ಸಿ ಸಮನ್ವಯ ಅಧಿಕಾರಿ ರವಿಕಿರಣ್, ಮೇಲ್ವಿಚಾರರಾದ ವಿದ್ಯಾ, ಸೇವಾಪ್ರತಿನಿಧಿ ಯವರಾದ ಶಿವರಾಮ್, ವಿಶಾಲಾಕ್ಷಿ. ಸಿಎಸ್ ಸಿ ಸಿಬ್ಬಂದಿ ವಿದ್ಯಾ, ಹರ್ಷಿತಾ, ಸುವಿಧಾ ಸಹಾಯಕರಾದ ಪದ್ಮಾವತಿ. ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.