ಉಜಿರೆ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಕಾಲೇಜು ಮತ್ತು ಯೋಗ ವಿಜ್ಞಾನ ಆಸ್ಪತೆ ವತಿಯಿಂದ ನ.18 ರಂದು ಉಜಿರೆ ಮಾತೃಶ್ರೀ ರತ್ನವರ್ಮ ಹೆಗ್ಗಡೆ ಆಡಿಟೋರಿಯಂನಲ್ಲಿ ಐದನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ನಡೆಯಿತು.
ಉಜಿರೆ ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಎಸ್ ಆರ್ ಕೆ ಎಂ ಸಿ ತಮಿಳುನಾಡು ಮತ್ತು ಕಾಂಜನ್ ಗಾಡ್ ಪ್ರಕೃತಿ ಸೌಖ್ಯಮ್ ಇದರ ಪ್ರೊಫೆಸರ್ ಡಾ. ಶಿಮಿಜಿ ನಾಯರ್, ಸೇಲಂ ನ್ಯಾಚುರ್ ಕ್ಯಾರ್ ಆಸ್ಪತ್ರೆಯ ಮುಖ್ಯ ಮೆಡಿಕಲ್ ಅಧಿಕಾರಿ ಡಾ. ಆರ್. ಮಾಲತಿ, ಲಾಯಿಲ ಪ್ರಸನ್ನ ಆಯುರ್ ವೇದಿಕ್ ಕಾಲೇಜಿನ ಎಂಡಿ ಡಾ. ವೃಂದಾ ಬೆಡೇಕಾರ್ ಭಾಗವಹಿಸಿದ್ದರು, ಶ್ರೀ ಧ. ಮ. ನ್ಯಾಚುರೋಪತಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಸುಜಾತಾ ಕೆ. ಜೆ. ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ನ್ಯಾಚುರೋಪತಿ ಆಸ್ಪತ್ರೆಯ ಡಾ. ಶಿವಪ್ರಸಾದ್ ಶೆಟ್ಟಿ, ಡೀಮ್ ಡಾ. ಗೀತಾ ಬಿ. ಶೆಟ್ಟಿ, ಉಪಸ್ಥಿತರಿದ್ದರು.
ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.