ಮಚ್ಚಿನ: ನೆತ್ತರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಬಾಲಮೇಳ ಕಾರ್ಯಕ್ರಮ ನ.21ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಟಾಣಿ ಆಶ್ವಿಕ್ ಮತ್ತು ಶಾಲಾ ನಾಯಕಿ ಕುಶಿ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಚ್ಚಿನ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ, ಪಂಚಾಯತ್ ಸದಸ್ಯರುಗಳಾದ ರುಕ್ಮಿಣಿ, ಜಯಶ್ರೀ, ಪ್ರಮೋದ್, ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ನವೀನ್ ಕೋಡಿ, ಶಾಲಾ ಮುಖ್ಯ್ಯೊಪಾಧ್ಯಾಯರಾದ ಸೀತಾರಾಮ್ ಬೆಳಾಲು,ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಜ್ಯೋತಿ ಮಚ್ಚಗುರಿ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖಾ ಮೇಲ್ವಿಚಾರಕಿ ಶ್ರೀಮತಿ ಸುಮನಾ, ಶಕ್ತಿ ನವೋದಯ ಸಂಘದ ಅಧ್ಯಕ್ಷರಾದ ಮೋಹಿನಿ ಮಚ್ಚಗುರಿ,ಆಶಾ ಕಾರ್ಯಕರ್ತೆ ಜಾನಕಿ,ಮಕ್ಕಳ ಪೋಷಕರು, ಶಕ್ತಿ ಸಂಘದ ಸದಸ್ಯರುಗಳು ಹಾಗೂ ಶಾಲಾ ಪುಟಾಣಿಗಳು ಭಾಗವಹಿಸಿದರು.
ಅಂಗನವಾಡಿ ಪುಟಾಣಿಗಳಿಗೆ ವಿವಿಧ ಸ್ಪರ್ಧೆ ಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿದರು. ಸಹಾಯಕಿ ವಂದಿಸಿದರು. ನಂತರ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು