ವಕೀಲರ ಕಚೇರಿ ಶುಭಾರಂಭ

0

 

ಸುಳ್ಯದ ತಾಲೂಕು ಪಂಚಾಯತ್ ಮುಂಭಾಗದ ಕರೋಡಿ ಕಾಂಪ್ಲೆಕ್ಸ್ ನಲ್ಲಿ ಸಂದೀಪ್ ಮದುವೆಗದ್ದೆ ರವರ ವಕೀಲರ ಕಚೇರಿ ಸೆ.9 ರಂದು ಶುಭಾರಂಭಗೊಂಡಿತು.
ಕಚೇರಿಯನ್ನು ಬೆಂಗಳೂರಿನ ಸಿ.ಬಿ.ಐ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ಉದ್ಯಮಿ ಕೆ.ಎಸ್. ಗೋಪಾಲಕೃಷ್ಣ ಬೋರ್ಕರ್, ವೆಂಕಟ್ರಮಣ ಕೆದಂಬಾಡಿ, ನಿವೃತ್ತ ಪ್ರಾಂಶುಪಾಲರಾದ ಬಾಲಚಂದ್ರ, ಅಬೂಬಕ್ಕರ್ ಅಡ್ಕಾರ್, ಜಗದೀಶ್, ನವೀನ ಪದ್ಯಾಣ, ಸಂದೀಪ್ ತಂದೆ ಲಕ್ಷ್ಮಣ ಗೌಡ ಮದುವೆಗದ್ದೆ, ತಾಯಿ ಶ್ರೀಮತಿ ತಾರಾಮಣಿ ಉಪಸ್ಥಿತರಿದ್ದರು. ದೃತಿಲೇಖ ಎಂಟರ್ ಪ್ರೈಸಸ್ ನ ಮೋಹನ್ ಅರಂಬೂರು ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ರವರ ಪತ್ನಿ ಶ್ರೀಮತಿ ಜಯಶ್ರೀ ವಂದಿಸಿದರು.


ಈ ಸಂದರ್ಭದಲ್ಲಿ ಶ್ರೀ ಹರಿ ಕುಕ್ಕುಡೇಲು, ನಂದರಾಜ್ ಸಂಕೇಶ, ಜಯರಾಮ ಗೌಡ ಮದುವೆಗದ್ದೆ, ನಳಿನ್ ಕುಮಾರ್ ಕೋಡ್ತುಗುಳಿ, ವೆಂಕಪ್ಪ ನೆಕ್ರಾಜೆ, ಪ್ರಸಾದ್ ಬೊಳುಬೈಲು, ಹೊನ್ನಪ್ಪ ಕೇರ್ಪಳ, ಶ್ರೀಮತಿ ಚೇತನಾ ಮೋಹನ್, ಸಂಜೀವ ಮದುವೆಗದ್ದೆ, ಜನಾರ್ದನ ಮಾವಂಜಿ, ಸತೀಶ್ ಕೋಲ್ಚಾರ್, ಧನಂಜಯ ಮದುವೆಗದ್ದೆ, ಚಿದಾನಂದ ಮದುವೆಗದ್ದೆ, ರಾಘವ ಮದುವೆಗದ್ದೆ, ಮೊದಲಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here