- ಜ.29 ರಿಂದ ಫೆ.3ನೇಮೋತ್ಸವ ಸಂಭ್ರಮ, ಅನ್ನಸಂತರ್ಪಣೆ
ಪುತ್ತೂರು: ಒಳಮೊಗ್ರು ಗ್ರಾಮದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವವು ಬೊಳ್ಳಾಡಿ ರಾಜಮಾಡದಲ್ಲಿ ಜ.29ರಿಂದ ಆರಂಭಗೊಂಡು ಫೆ.೩ ರವರೇಗೆ ನಡೆಯಲಿದೆ. ಜ.29 ರಂದು ಬೆಳಿಗ್ಗೆ ಮುಗೇರು ಕದಿಕೆ ಚಾವಡಿ ಮತ್ತು ಕೈಕಾರ ಕಿನ್ನಿಮಾಣಿ ದೈವಸ್ಥಾನದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಮತ್ತು ತಂಬಿಲ ಸೇವೆ, ಮುಗೇರು ಕದಿಕೆ ಚಾವಡಿಯಲ್ಲಿ ಕದಿಕೆ ತುಂಬಿಸುವುದು, ಸಂಜೆ ೪.೩೦ ರಿಂದ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಕೀರ್ವಾಳು ಭಂಡಾರ ಇಳಿಸಿ ಹೊಸಮಾರು ಕಟ್ಟೆಗೆ ಬರುವುದು ನಡೆಯಲಿದೆ. ಸಂಜೆ 5 ಕ್ಕೆ ರಾಜಮಾಡದಲ್ಲಿ ಭಜನಾ ಕಾರ್ಯಕ್ರಮ, ಸಂಜೆ ೫.೩೦ ಕ್ಕೆ ಮುಗೇರು ಕದಿಕೆ ಚಾವಡಿಯಿಂದ ಶ್ರೀ ಪೂಮಾಣಿ ದೈವದ ಹಾಗೂ ಪಿಲಿಭೂತ ಮಲರಾಯ ದೈವಗಳ ಕೀರ್ವಾಳು ಭಂಡಾರ ಇಳಿಸಿ, ಹೊಸಮಾರುವಿನಿಂದ ಕಿನ್ನಿಮಾಣಿ ಹಾಗು ಪರಿವಾರ ದೈವಗಳ ಕೀರ್ವಾಳು ಭಂಡಾರದೊಂದಿಗೆ ಸೇರಿ ಬೊಳ್ಳಾಡಿ ರಾಜಮಾಡದಲ್ಲಿ ಏರಿಸುವುದು ನಡೆಯಲಿದೆ. ರಾತ್ರಿ ೭ ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಜ.೩೦ ರಂದು ಬೆಳಿಗ್ಗೆ ಶ್ರೀ ಕಿನ್ನಿಮಾಣಿ ದೈವದ ನೇಮ, ಗಂಧಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಶ್ರೀ ಪೂಮಾಣಿ ದೈವದ ನೇಮ, ಗಂಧ ಪ್ರಸಾದ ವಿತರಣೆ, ಸಂಜೆ 6.30 ಕ್ಕೆ ಶ್ರೀ ಮಲರಾಯ ದೈವದ ನೇಮ, ಗಂಧ ಪ್ರಸಾದ ವಿತರಣೆ ಬಳಿಕ ಸುಡುಮದ್ದು ಪ್ರದರ್ಶನ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಜ.31 ರಂದು ಬೆಳಿಗ್ಗೆ 7 ಕ್ಕೆ ವರ್ಣರ ಪಂಜುರ್ಲಿ ದೈವದ ನೇಮ, ಗಂಧ ಪ್ರಸಾದ ವಿತರಣೆ, 9 ಕ್ಕೆ ಶ್ರೀ ಪಿಲಿಭೂತ ದೈವದ ನೇಮ, ಗಂಧ ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಬಳಿಕ ಶ್ರೀ ಗುಳಿಗ ದೈವದ ನೇಮ, ಸಂಜೆ ೪ ಕ್ಕೆ ಪೂಮಾಣಿ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಭಂಡಾರ ರಾಜಮಾಡದಿಂದ ಇಳಿಸಿ ಮುಗೇರು ಕದಿಕೆ ಚಾವಡಿ ಹಾಗೂ ಕೈಕಾರ ದೈವಸ್ಥಾನದಲ್ಲಿ ಏರಿಸುವುದು, ಪಿಲಿಭೂತ ದೈವ ಭಂಡಾರ ಪಿಲಿಭೂತ ಮಾಡದಲ್ಲಿ ತಂಬಿಲ ಸೇವೆ ಮಾಡಿ ಕದಿಕೆ ಚಾವಡಿಯಲ್ಲಿ ಏರಿಸುವುದು, ಮಲರಾಯ ದೈವಕ್ಕೆ ಗುತ್ತು ಆವರಣದಲ್ಲಿ ತಂಬಿಲ ಸೇವೆ ಮಾಡಿ ಕದಿಕೆ ಚಾವಡಿಯಲ್ಲಿ ಏರಿಸುವುವ ಕಾರ್ಯಕ್ರಮ ನಡೆಯಲಿದೆ.
ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಉರ್ವದಲ್ಲಿ ನಡೆಯಲಿದೆ. ಫೆ. ೧ ರಂದು ಬೆಳಿಗ್ಗೆ ಉರ್ವದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಸಂಜೆ ಗಂಟೆ ೪ ಕ್ಕೆ ಶ್ರೀ ದುರ್ಗಾಪೂಜೆ, ಸಂಜೆ ೪.೩೦ ಕ್ಕೆ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವುದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಪಂಜುರ್ಲಿ ದೈವದ ನೇಮ ನಡೆಯಲಿದೆ. ಫೆ.೨ ರಂದು ಬೆಳಿಗ್ಗೆ ಧೂಮಾವತಿ ದೈವದ ನೇಮ ಮಧ್ಯಾಹ್ನ ಗುಳಿಗ ದೈವದ ನೇಮ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.೩ ರಂದು ಬೆಳಿಗ್ಗೆ ಮುಗೇರು ಕಾಯರ್ ಮಜಲಿನಲ್ಲಿ ಇಷ್ಟ ದೇವತೆ ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ಹೊಸಮಾರು ರಕ್ತೇಶ್ವರಿ ಕಟ್ಟೆಯಲ್ಲಿ ತಂಬಿಲ ಸೇವೆ ನಡೆಯಲಿದೆ. ಸರಕಾರದ ಕೋವಿಡ್ ೧೯ ನಿಯಮದಂತೆ ಕಾರ್ಯಕ್ರಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು ಭಕ್ತಾಧಿಗಳು ಸಹಕರಿಸುವ ಮೂಲಕ ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸುವಂತೆ ಕ್ಷೇತ್ರದ ಮೊಕ್ತೇಸರರುಗಳಾದ ಎ.ಚಿಕ್ಕಪ್ಪ ನಾಕ್ ಅರಿಯಡ್ಕ, ಎ.ಜಿ ವಿಜಯ ಕುಮಾರ್ ರೈ ಮುಗೇರು, ನಿತ್ಯಾನಂದ ಶೆಟ್ಟಿ ಕೈಕಾರ ಹಾಗೂ ಊರ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊರೆಕಾಣಿಕೆ ಸಮರ್ಪಣೆ
ಜ.29 ರಂದು ಬೆಳಿಗ್ಗೆ ೮. ೩೦ ಕ್ಕೆ ಮುಗೇರು ಕದಿಕೆ ಚಾವಡಿ ಕದಿಕೆ ತುಂಬಿಸಲು ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ದರ್ಬೆತ್ತಡ್ಕ ಶಾಲೆ, ನೀರ್ಪಾಡಿ, ಅಜಲಡ್ಕ ವಿಠಲ ಪೂಜಾರಿ ಅಂಗಡಿ, ಉಪ್ಪಳಿಗೆ, ಗುಮ್ಮಟೆಗದ್ದೆ, ಸಾಹೇಬರ ಅಂಗಡಿ ಹತ್ತಿರ, ಶ್ರೀ ದೇವಿ ಭಜನಾ ಮಂದಿರ ಮುಂಡೋವುಮೂಲೆ, ಅಜ್ಜಿಕಲ್ಲು, ಬೈರೋಡಿ, ಕಾಪಿಕಾಡು, ತೊಟ್ಲ, ಕೈಕಾರ ಹಾಲಿನ ಸೊಸೈಟಿ, ಕೈಕಾರ ಜುಮಾದಿ ದೈವಸ್ಥಾನದ ಹತ್ತಿರ, ರಾಜ್ ಕಾಂಪ್ಲೆಕ್ಸ್ ಪರ್ಪುಂಜ, ಸದಾಶಿವ ಭಜನಾ ಮಂದಿ, ಕೊಲತ್ತಡ್ಕ ಶಿವಕೃಪಾ, ಕುಂಬ್ರ ಶ್ರೀ ರಾಮ ಭಜನಾ ಮಂದಿರ, ಶೇಖಮಲೆ ಹಾಗೂ ಮುಡಾಲ ಮರಾಟಿ ಮಂದಿರ ಇಲ್ಲಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.