ಪುತ್ತೂರು : ಪುತ್ತೂರು ವೀರಮಾಚಿದೇವ ವಿವಿಧೋದ್ಧೇಶ ಸಹಕಾರಿ ಸಂಘದ ಕೇಂದ್ರ ಕಛೇರಿಯಲ್ಲಿ ಮಾಚಿದೇವ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿ. ದೀಪ ಬೆಳಗಿಸಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಪಿ.ಎನ್ ಸುಭಾಷ್ಚಂದ್ರರವರು ವೀರ ಮಾಚಿದೇವರ ಬಗ್ಗೆ ಮಾತನಾಡಿದರು. ಸಂಘದ ನಿರ್ದೇಶಕ ಜಯಂತ್ ಬೇಕಲ್, ಪ್ರಭಾರ ಕಾರ್ಯದರ್ಶಿ ದಯಾಮಣಿ, ಸಿಬ್ಬಂದಿ ವಸಂತಿ, ಸುಜಿತ್ ಉಪಸ್ಥಿತರಿದ್ದರು.