ಬಾರ್ದಡ್ಡು ಸುಬ್ಬಣ್ಣ ಭಟ್ ನಿಧನ

0

ಪುತ್ತೂರು:‌ ಪ್ರಸ್ತುತ ಬೈಪಾಸ್ ಬಳಿಯ ಉರ್ಲಾಂಡಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಮೂಲತ: ಬಂಟ್ವಾಳ ತಾಲೂಕಿನ ಬಾರ್ದಡ್ಡು ನಿವಾಸಿ ಸುಬ್ಬಣ್ಣ ಭಟ್(86ವ)ರವರು ಅಲ್ಪಕಾಲದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅಡ್ಯನಡ್ಕ ಸಮೀಪದ ಸಾಯ ದುರ್ಗಾಪರಮೇಶ್ವರಿ ಕಿ.ಪ್ರಾ.ಶಾಲಾ‌ ನಿವೃತ್ತ ಶಿಕ್ಷಕರಾಗಿದ್ದ ಇವರು ಹಲವಾರು ಯಕ್ಷಗಾನ ತಾಳಮದ್ದಲೆ, ಸಾಹಿತ್ಯಗೋಷ್ಠಿ, ವಿದ್ವಾಂಸರಿಗೆ ಸನ್ಮಾನ ಏರ್ಪಡಿಸಿದ್ದರಲ್ಲದೆ ಲೋಕಕಲ್ಯಾಣಕ್ಕಾಗಿ ಗಾಯತ್ರಿ ಯಜ್ಞ ಮತ್ತು ಪಂಚಯಜ್ಞ ನಡೆಸಿದ್ದರು. ಮೃತರು ಪತ್ನಿ, ಪುತ್ರರಾದ ಬೆಂಗಳೂರಿನಲ್ಲಿ ಲೆಕ್ಕಪರಿಶೋಧಕರಾಗಿರುವ ಶಂಭು ಮೂರ್ತಿ, ವೈದಿಕರಾಗಿರುವ ರಾಜನಾರಾಯಣ, ಅಳಿಯ ಸೂರ್ಯನಾರಾಯಣ ಭಟ್, ಪುತ್ರಿ ಅನ್ನಪೂರ್ಣ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here