ಎಸಿ ಭರವಸೆ ಧರಣಿ ಹಿಂತೆಗೆತ

0

ಪುತ್ತೂರು: ಪಡವನ್ನೂರು ಗ್ರಾಮದ ಅಂಬಟೆಮೂಲೆಯಲ್ಲಿ ಬಡ ನಾಲ್ಕು ಮನೆಗಳಿಗೆ ಅನಾಧಿಕಾಲದಿಂದಲೂ ಓಡಾಡುವ 6 ಅಡಿ ಅಗಲದ ರಸ್ತೆಯನ್ನು ಸ್ಥಳೀಯರೊಬ್ಬರು ಹೊಂಡ ತೆಗೆದು ರಸ್ತೆ ಬಂದ್ ಮಾಡಿ, ಕುಡಿಯುವ ನೀರಿಗೂ ತೊಂದರೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಎದುರು ಧರಣಿ ನಿರತ ನೊಂದ ಫಲಾನುಭವಿಗಳನ್ನು ಸಹಾಯಕ ಕಮೀಷನರ್ ವಿಚಾರಿಸಿದ್ದಲ್ಲದೆ ಅದಕ್ಕೆ ಸಂಬಂಧಿಸಿ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥ ಮಾಡಿ ರಸ್ತೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.

ಫೆ. 16ರ ಒಳಗೆ ರಸ್ತೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ನೀಡಿದ ಭರವಸೆಯಂತೆ ಧರಣಿ ನಿರಂತ ನೊಂದ ಫಲಾನುಭವಿಗಳು ಧರಣಿ ಹಿಂಪಡೆದಿದ್ದಾರೆ. ಫೆ. 16ರ ಒಳಗೆ ಸಮಸ್ಯೆ ಇತ್ಯರ್ಥ ಆಗದಿದ್ದಲ್ಲಿ ಮತ್ತೆ ಧರಣಿ ಮಾಡುತ್ತೇವೆ ಎಂದು ನೊಂದ ಫಲಾನುಭವಿಗಳು ತಿಳಿಸಿದ್ದಾರೆ.

ರಸ್ತೆಗೆ ಹೊಂಡ ತೋಡಿ ಸಂಚಾರ ಬಂದ್, ಕುಡಿಯವ ನೀರಿಗೂ ಅಡ್ಡಿ ಮಾಡಿದ ಆರೋಪ – ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಎದುರು ಧರಣಿ ಕುಳಿತ ನೊಂದ ಫಲಾನುಭವಿಗಳು

LEAVE A REPLY

Please enter your comment!
Please enter your name here