ಕಲ್ಲೇಗ ದೈವಸ್ಥಾನದಲ್ಲಿ ಹರಕೆ ನೇಮ

0

ಪುತ್ತೂರು: ಕಾರಣಿಕದ ಕ್ಷೇತ್ರವಾಗಿರುವ ಇತಿಹಾಸ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಜರುಗಿದ ಬಳಿಕ ಹರಕೆ ನೇಮ ನಡೆಯುವುದು ಸಂಪ್ರದಾಯವಾಗಿದ್ದು, ಈ ಸಲ ಮೂರು ಹರಕೆ ನೇಮ ನಡೆಯಲಿದೆ.

 


ಫೆ.19ರಂದು ರಾತ್ರಿ ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್‌ರವರ ವರ್ಷದ ಹರಕೆ ನೇಮ ನಡೆಯಿತು. ಈ ಸಂದರ್ಭದಲ್ಲಿ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಮುಂದೆ ಎರಡು ಹರಕೆ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here